ಬಲಗೈ ಬ್ಯಾಟ್ಸ್ಮನ್ ರಾಹುಲ್ (81; 51ಎಸೆತ, 8ಬೌಂಡರಿ, 3 ಸಿಕ್ಸರ್) ಅವರು ಮಾತ್ರ ದಿಟ್ಟತನದಿಂದ ಆಡಿದರು. ಆದರೆ, ಶುಭಮನ್ ಗಿಲ್, ನಿತೀಶ್ ರಾಣಾ, ಏಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್ ಮತ್ತು ನಾಯಕ ದಿನೇಶ್ ಕಾರ್ತಿಕ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಮಹೇಂದ್ರಸಿಂಗ್ ಧೋನಿಯ ತಂತ್ರಗಾರಿಕೆ ಬಿಡಲಿಲ್ಲ. ಒಂದೆಡೆ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಆದರೆ ಇನ್ನೊಂದು ತುದಿಯಲ್ಲಿ ಅವರೊಂದಿಗೆ ದೊಡ್ಡ ಜೊತೆಯಾಟ ಕಟ್ಟುವ ಪ್ರಯತ್ನಗಳನ್ನು ಬೌಲರ್ಗಳು ವಿಫಲಗೊಳಿಸಿದರು. ಚೆನ್ನೈ ತಂಡದ ಫೀಲ್ಡಿಂಗ್ ಕೂಡ ಗಮನ ಸೆಳೆಯಿತು.