<p><strong>ಮುಂಬೈ:</strong>'ನಾನು ಒಂಬತ್ತು ವರ್ಷಗಳಿಂದ ಮನೆಗೆ ತೆರಳಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಮನೆಗೆ ಹಿಂತಿರುಗಲು ನಿರ್ಧರಿಸಿದ್ದೆ' ಎಂದು ಮುಂಬೈ ಇಂಡಿಯನ್ಸ್ನ ಯುವ ಪ್ರತಿಭಾವಂತ 'ಮಿಸ್ಟರಿ' ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಬಹಿರಂಗಪಡಿಸಿದ್ದಾರೆ.</p>.<p>ಗಾಯಾಳು ಅರ್ಷದ್ ಖಾನ್ ಪ್ರಸಕ್ತ ಸಾಲಿನ ಐಪಿಎಲ್ನಿಂದಲೇ ನಿರ್ಗಮಿಸಿದ್ದರಿಂದಉತ್ತರ ಪ್ರದೇಶದ 24 ವರ್ಷದ ಎಡಗೈ ಸ್ಪಿನ್ನರ್ ಕಾರ್ತಿಕೇಯ, ಮುಂಬೈ ಪರ ಆಡುವ ಅವಕಾಶವನ್ನು ಗಿಟ್ಟಿಸಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/no-hierarchy-in-our-team-hardik-on-titans-success-mantra-933119.html" itemprop="url">IPL 2022: ಗುಜರಾತ್ ಯಶಸ್ಸಿನ ಗುಟ್ಟು ಬಯಲು ಮಾಡಿದ ಹಾರ್ದಿಕ್ ಪಾಂಡ್ಯ </a></p>.<p>ಅಲ್ಲದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶನಿವಾರ ನಡೆದ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕೇವಲ 19 ರನ್ ನೀಡಿ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಗಳಿಸುವ ಮೂಲಕ ಪ್ರಭಾವಿ ಎನಿಸಿಕೊಂಡಿದ್ದರು.</p>.<p>ಜೀವನದಲ್ಲಿ ಸಾಧಿಸಬೇಕೆಂಬ ಛಲ ಅಚಲವಾಗಿದ್ದರಿಂದ ಕುಮಾರ್ ಕಾರ್ತಿಕೇಯ ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬರುವಂತೆ ತಂದೆ-ತಾಯಿ ಒತ್ತಾಯಿಸುತ್ತಿದ್ದರು. ಆದರೆ ನನ್ನ ಗುರಿಯಲ್ಲಿ ಬದ್ಧನಾಗಿದ್ದೆ. ಈಗ ಐಪಿಎಲ್ ನಂತರ ಮನೆಗೆ ಮರಳುವುದಾಗಿ ತಿಳಿಸಿದ್ದಾರೆ.</p>.<p>ದಿಗ್ಗಜ ಸಚಿನ್ ತೆಂಡೂಲ್ಕರ್ನೀಡಿದ ಸಲಹೆಯಿಂದಆತ್ಮವಿಶ್ವಾಸ ವೃದ್ಧಿಸಿತು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong>'ನಾನು ಒಂಬತ್ತು ವರ್ಷಗಳಿಂದ ಮನೆಗೆ ತೆರಳಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಮನೆಗೆ ಹಿಂತಿರುಗಲು ನಿರ್ಧರಿಸಿದ್ದೆ' ಎಂದು ಮುಂಬೈ ಇಂಡಿಯನ್ಸ್ನ ಯುವ ಪ್ರತಿಭಾವಂತ 'ಮಿಸ್ಟರಿ' ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಬಹಿರಂಗಪಡಿಸಿದ್ದಾರೆ.</p>.<p>ಗಾಯಾಳು ಅರ್ಷದ್ ಖಾನ್ ಪ್ರಸಕ್ತ ಸಾಲಿನ ಐಪಿಎಲ್ನಿಂದಲೇ ನಿರ್ಗಮಿಸಿದ್ದರಿಂದಉತ್ತರ ಪ್ರದೇಶದ 24 ವರ್ಷದ ಎಡಗೈ ಸ್ಪಿನ್ನರ್ ಕಾರ್ತಿಕೇಯ, ಮುಂಬೈ ಪರ ಆಡುವ ಅವಕಾಶವನ್ನು ಗಿಟ್ಟಿಸಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/no-hierarchy-in-our-team-hardik-on-titans-success-mantra-933119.html" itemprop="url">IPL 2022: ಗುಜರಾತ್ ಯಶಸ್ಸಿನ ಗುಟ್ಟು ಬಯಲು ಮಾಡಿದ ಹಾರ್ದಿಕ್ ಪಾಂಡ್ಯ </a></p>.<p>ಅಲ್ಲದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶನಿವಾರ ನಡೆದ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕೇವಲ 19 ರನ್ ನೀಡಿ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಗಳಿಸುವ ಮೂಲಕ ಪ್ರಭಾವಿ ಎನಿಸಿಕೊಂಡಿದ್ದರು.</p>.<p>ಜೀವನದಲ್ಲಿ ಸಾಧಿಸಬೇಕೆಂಬ ಛಲ ಅಚಲವಾಗಿದ್ದರಿಂದ ಕುಮಾರ್ ಕಾರ್ತಿಕೇಯ ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬರುವಂತೆ ತಂದೆ-ತಾಯಿ ಒತ್ತಾಯಿಸುತ್ತಿದ್ದರು. ಆದರೆ ನನ್ನ ಗುರಿಯಲ್ಲಿ ಬದ್ಧನಾಗಿದ್ದೆ. ಈಗ ಐಪಿಎಲ್ ನಂತರ ಮನೆಗೆ ಮರಳುವುದಾಗಿ ತಿಳಿಸಿದ್ದಾರೆ.</p>.<p>ದಿಗ್ಗಜ ಸಚಿನ್ ತೆಂಡೂಲ್ಕರ್ನೀಡಿದ ಸಲಹೆಯಿಂದಆತ್ಮವಿಶ್ವಾಸ ವೃದ್ಧಿಸಿತು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>