'ಇವೆಲ್ಲವೂ ಮನಸ್ಸಿಗೆ ಸಂಬಂಧಪಟ್ಟಿದ್ದಾಗಿದೆ. ಒಂದೆರಡು ಕೆಟ್ಟ ಪ್ರದರ್ಶನದಿಂದ ಲಯ ತಪ್ಪಬಹುದು. ಇದು ನಿರಂತರವಾಗಿ ಕಾಡುವ ಭೀತಿ ಇರುವುದರಿಂದ ಅದರಿಂದ ಹೊರಬರುವುದು ಕಷ್ಟವೆನಿಸುತ್ತದೆ. ನಾನಿದಕ್ಕೆ ಶೇಕಡಾವಾರು ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಮನಸ್ಸು ಹಾಗೂ ಮನಸ್ಸಿನ ಶಕ್ತಿಯ ನಡುವಣ ಯುದ್ಧವಾಗಿದೆ. ರಾತ್ರೋರಾತ್ರಿ ಕೆಟ್ಟ ಆಟಗಾರನಾಗಲುಸಾಧ್ಯವಿಲ್ಲ. ಈ ವಿಚಾರ ವಿರಾಟ್ ಅವರಿಗೂ ಗೊತ್ತು. ಆದರೆ ಈ ರೀತಿಯಾಗಿ ಯೋಚಿಸುವ ಮೂಲಕ ಮನಸ್ಸನ್ನು ಸಜ್ಜುಗೊಳಿಸಬೇಕಿದೆ' ಎಂದು ತಿಳಿಸಿದ್ದಾರೆ.