ಮೊದಲ ಪಂದ್ಯದಲ್ಲಿ ಇನ್ನೂರಕ್ಕೂ ಹೆಚ್ಚು ರನ್ಗಳ ಮೊತ್ತವನ್ನು ಪೇರಿಸಿಯೂ ಸೋತಿದ್ದ ತಂಡವು, ಎರಡನೇ ಪಂದ್ಯದಲ್ಲಿ 128 ರನ್ಗಳ ಗುರಿ ಸಾಧಿಸಲು ಕಷ್ಟಪಟ್ಟಿತ್ತು. 19.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆದ್ದು ನಿಟ್ಟುಸಿರುಬಿಟ್ಟಿತ್ತು. ಆದರೆ ಆ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ಲಯ ಕಂಡುಕೊಂಡಿದ್ದರು. ಶ್ರೀಲಂಕಾದ ವಣಿಂದು ಹಸರಂಗಾ, ಆಕಾಶ್ ದೀಪ್ ಮತ್ತು ಹರ್ಷಲ್ ಪಟೇಲ್ ಕೋಲ್ಕತ್ತ ಬ್ಯಾಟರ್ಗಳನ್ನು ಕಾಡಿದ್ದರು. ಇದೀಗ ಅವರ ಮುಂದೆ ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್ ಪಡೆಯ ಸವಾಲು ಇದೆ.