<p><strong>ನವೆದಹಲಿ:</strong> ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ, ಎದುರಾಳಿ ತಂಡದ ಕೆ.ಎಲ್. ರಾಹುಲ್ ಅವರನ್ನು ಅಣಕಿಸಿದ್ದಾರೆ. </p><p>ಈ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವಿನ ಬಳಿಕ ಡೆಲ್ಲಿ ತಂಡದ ಕನ್ನಡಿಗ ರಾಹುಲ್, 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಅನುಕರಿಸಿ 'ಇದು ನನ್ನ ನೆಲ' ಎಂಬ ಸಂದೇಶ ಕೊಟ್ಟಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. </p><p>ಈಗ ಡೆಲ್ಲಿ ನೆಲದಲ್ಲಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ಸೇಡು ತೀರಿಸಿಕೊಂಡಿದೆ. ಅಲ್ಲದೆ ಸ್ಥಳೀಯ ಹೀರೊ, ಬೆಂಗಳೂರು ತಂಡದ ಕೊಹ್ಲಿ, ರಾಹುಲ್ ಎದುರೇ ಅದೇ ಸಂಭ್ರಮವನ್ನು ಪುನರಾವರ್ತಿಸಿದ್ದಾರೆ. </p><p>ತಮ್ಮನ್ನು ಕೆಣಕಿದವರನ್ನು ಕೊಹ್ಲಿ ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಆದರೆ ಈ ಸಲ ತಮ್ಮ ಗೆಳೆಯ ರಾಹುಲ್ ವಿರುದ್ಧ ಕೊಹ್ಲಿಗೆ ಮುಯ್ಯಿ ತೀರಿಸುವ ಇರಾದೆ ಇರಲಿಲ್ಲ. ಹಾಗಾಗಿ ಬಹಳ ಹಗುರವಾಗಿ ತಮಾಷೆ ಮಾಡುತ್ತಾ 'ಇದು ನನ್ನ ನೆಲ' ಎಂದು ಸನ್ನೆ ಮಾಡಿದರು. ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. </p>. <p>ಇದಕ್ಕೂ ಮೊದಲು ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಕೊಹ್ಲಿ ಹಾಗೂ ರಾಹುಲ್ ನಡುವೆ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಕ್ಷೇತ್ರ ರಕ್ಷಣೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿರುವುದು ಕೊಹ್ಲಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನು ಡೆಲ್ಲಿ ವಿಕೆಟ್ ಕೀಪರ್ ರಾಹುಲ್ ಅವರಲ್ಲಿ ತೋಡಿಕೊಂಡಿದ್ದರು. </p>.IPL 2025: ಕೆ.ಎಲ್. ರಾಹುಲ್ 'ಕಾಂತಾರ' ಸಂಭ್ರಮದ ಹಿಂದಿನ ರಹಸ್ಯವೇನು?.RCB vs DC Highlights | ತವರಿನಾಚೆ ಸತತ 6ನೇ ಜಯ, ರನ್ ಬೇಟೆಯಲ್ಲಿ ಕೊಹ್ಲಿ ಅಗ್ರ.ಬೆಂಗಳೂರಿನ ಸೋಲಿಗೆ ಪಂಜಾಬ್ ವಿರುದ್ಧ ಸೇಡು ತೀರಿಸಿದ ಕೊಹ್ಲಿ; ವ್ಯಾಪಕ ಚರ್ಚೆ.IPL 2025 | ಕೊಹ್ಲಿ ತವರಲ್ಲಿ ಗೆದ್ದ RCB; ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವೆದಹಲಿ:</strong> ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ, ಎದುರಾಳಿ ತಂಡದ ಕೆ.ಎಲ್. ರಾಹುಲ್ ಅವರನ್ನು ಅಣಕಿಸಿದ್ದಾರೆ. </p><p>ಈ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವಿನ ಬಳಿಕ ಡೆಲ್ಲಿ ತಂಡದ ಕನ್ನಡಿಗ ರಾಹುಲ್, 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಅನುಕರಿಸಿ 'ಇದು ನನ್ನ ನೆಲ' ಎಂಬ ಸಂದೇಶ ಕೊಟ್ಟಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. </p><p>ಈಗ ಡೆಲ್ಲಿ ನೆಲದಲ್ಲಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ಸೇಡು ತೀರಿಸಿಕೊಂಡಿದೆ. ಅಲ್ಲದೆ ಸ್ಥಳೀಯ ಹೀರೊ, ಬೆಂಗಳೂರು ತಂಡದ ಕೊಹ್ಲಿ, ರಾಹುಲ್ ಎದುರೇ ಅದೇ ಸಂಭ್ರಮವನ್ನು ಪುನರಾವರ್ತಿಸಿದ್ದಾರೆ. </p><p>ತಮ್ಮನ್ನು ಕೆಣಕಿದವರನ್ನು ಕೊಹ್ಲಿ ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಆದರೆ ಈ ಸಲ ತಮ್ಮ ಗೆಳೆಯ ರಾಹುಲ್ ವಿರುದ್ಧ ಕೊಹ್ಲಿಗೆ ಮುಯ್ಯಿ ತೀರಿಸುವ ಇರಾದೆ ಇರಲಿಲ್ಲ. ಹಾಗಾಗಿ ಬಹಳ ಹಗುರವಾಗಿ ತಮಾಷೆ ಮಾಡುತ್ತಾ 'ಇದು ನನ್ನ ನೆಲ' ಎಂದು ಸನ್ನೆ ಮಾಡಿದರು. ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. </p>. <p>ಇದಕ್ಕೂ ಮೊದಲು ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಕೊಹ್ಲಿ ಹಾಗೂ ರಾಹುಲ್ ನಡುವೆ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಕ್ಷೇತ್ರ ರಕ್ಷಣೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿರುವುದು ಕೊಹ್ಲಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನು ಡೆಲ್ಲಿ ವಿಕೆಟ್ ಕೀಪರ್ ರಾಹುಲ್ ಅವರಲ್ಲಿ ತೋಡಿಕೊಂಡಿದ್ದರು. </p>.IPL 2025: ಕೆ.ಎಲ್. ರಾಹುಲ್ 'ಕಾಂತಾರ' ಸಂಭ್ರಮದ ಹಿಂದಿನ ರಹಸ್ಯವೇನು?.RCB vs DC Highlights | ತವರಿನಾಚೆ ಸತತ 6ನೇ ಜಯ, ರನ್ ಬೇಟೆಯಲ್ಲಿ ಕೊಹ್ಲಿ ಅಗ್ರ.ಬೆಂಗಳೂರಿನ ಸೋಲಿಗೆ ಪಂಜಾಬ್ ವಿರುದ್ಧ ಸೇಡು ತೀರಿಸಿದ ಕೊಹ್ಲಿ; ವ್ಯಾಪಕ ಚರ್ಚೆ.IPL 2025 | ಕೊಹ್ಲಿ ತವರಲ್ಲಿ ಗೆದ್ದ RCB; ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>