<p><strong>ಬೆಂಗಳೂರು</strong>: ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 23ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. </p><p>ಪಂದ್ಯದ ದಿನ ಬೆಂಗಳೂರಿನಲ್ಲಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ನಿರ್ಧಾರ ಕೈಗೊಂಡಿದೆ. ಮೇ 17ರಂದು ಇಲ್ಲಿ ಆಯೋಜನೆಗೊಂಡಿದ್ದ ಆರ್ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗಿತ್ತು. </p><p>ಈ ಕುರಿತು ಐಪಿಎಲ್ ಆಡಳಿತ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಟೂರ್ನಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯದ ತಾಣಗಳನ್ನೂ ನಿರ್ಧರಿಸಲಾಗಿದೆ. </p><p>ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದಿಂದಾಗಿ ಮೇ 8ರಿಂದ 16ವರೆಗೆ ಐಪಿಲ್ ಟೂರ್ನಿಗೆ ಬಿಡುವು ನೀಡಲಾಗಿತ್ತು. ಪುನರಾರಂಭ ಹಂತದ ಮೊದಲ ಪಂದ್ಯವನ್ನು ಮೇ 17ರಂದು ಬೆಂಗಳೂರಿನಲ್ಲಿ ನಿಗದಿಪಡಿಲಾಗಿತ್ತು. </p><p>ಆರ್ಸಿಬಿ ತಂಡವು ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದೆ. ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ಛಲದಲ್ಲಿದೆ. </p><p><strong>ಅಹಮದಾಬಾದ್ಗೆ ಫೈನಲ್: </strong>ಈ ಸಲದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಅಹಮದಾಬಾದಿನಲ್ಲಿ ಜೂನ್ 3ರಂದು ನಡೆಸಲಾಗುವುದು. ಇದೇ ತಾಣದಲ್ಲಿ ಜೂನ್ 1ರಂದು ಎರಡನೇ ಕ್ವಾಲಿಫೈಯರ್ ಕೂಡ ನಡೆಯಲಿದೆ. </p><p>ಮೊದಲ ಕ್ವಾಲಿಫೈಯರ್ (ಮೇ 29) ಮತ್ತು ಎಲಿಮಿನೇಟರ್ (ಮೇ 30) ಪಂದ್ಯಗಳು ಚಂಡೀಗಡದ ಮುಲ್ಲನಪುರದಲ್ಲಿ ನಡೆಯಲಿವೆ. </p><p>2022 ಮತ್ತು 2023ರ ಆವೃತ್ತಿಯ ಫೈನಲ್ಗಳನ್ನು ಅಹಮದಾಬಾದಿನಲ್ಲಿ ಆಯೋಜಿಸಲಾಗಿತ್ತು. </p><p>‘ಹವಾಮಾನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ತಾಣಗಳನ್ನು ನಿಗದಿಪಡಿಸಲಾಗಿದೆ. ಪ್ಲೇಆಫ್ ಹಂತ ಮತ್ತು ಮಂಗಳವಾರದಿಂದ ನಡೆಯುವ ಲೀಗ್ ಪಂದ್ಯಗಳಿಗೆ ಪ್ಲೇಯಿಂಗ್ ಕಂಡಿಷನ್ ನಿಯಮದಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. </p><p>ಈ ಮೊದಲಿನ ವೇಳಾಪಟ್ಟಿಯ ಪ್ರಕಾರ ಫೈನಲ್ ಪಂದ್ಯವು ಮೇ 25ರಂದು ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ನಡೆಯಬೇಕಿತ್ತು. </p>.<ul><li><p>23ರಂದು ಲಖನೌದಲ್ಲಿ <strong>ಆರ್ಸಿಬಿ– ಎಸ್ಆರ್ಎಚ್</strong> ಮುಖಾಮುಖಿ</p></li><li><p>ಅಹಮದಾಬಾದಿನಲ್ಲಿ ಜೂನ್ 3ರಂದು <strong>ಫೈನಲ್</strong> ಹಣಾಹಣಿ</p></li><li><p>ಮುಲ್ಲನಪುರದಲ್ಲಿ <strong>ಮೊದಲ ಕ್ವಾಲಿಫೈಯರ್, ಎಲಿಮಿನೇಟರ್</strong></p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 23ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. </p><p>ಪಂದ್ಯದ ದಿನ ಬೆಂಗಳೂರಿನಲ್ಲಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ನಿರ್ಧಾರ ಕೈಗೊಂಡಿದೆ. ಮೇ 17ರಂದು ಇಲ್ಲಿ ಆಯೋಜನೆಗೊಂಡಿದ್ದ ಆರ್ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗಿತ್ತು. </p><p>ಈ ಕುರಿತು ಐಪಿಎಲ್ ಆಡಳಿತ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಟೂರ್ನಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯದ ತಾಣಗಳನ್ನೂ ನಿರ್ಧರಿಸಲಾಗಿದೆ. </p><p>ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದಿಂದಾಗಿ ಮೇ 8ರಿಂದ 16ವರೆಗೆ ಐಪಿಲ್ ಟೂರ್ನಿಗೆ ಬಿಡುವು ನೀಡಲಾಗಿತ್ತು. ಪುನರಾರಂಭ ಹಂತದ ಮೊದಲ ಪಂದ್ಯವನ್ನು ಮೇ 17ರಂದು ಬೆಂಗಳೂರಿನಲ್ಲಿ ನಿಗದಿಪಡಿಲಾಗಿತ್ತು. </p><p>ಆರ್ಸಿಬಿ ತಂಡವು ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದೆ. ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ಛಲದಲ್ಲಿದೆ. </p><p><strong>ಅಹಮದಾಬಾದ್ಗೆ ಫೈನಲ್: </strong>ಈ ಸಲದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಅಹಮದಾಬಾದಿನಲ್ಲಿ ಜೂನ್ 3ರಂದು ನಡೆಸಲಾಗುವುದು. ಇದೇ ತಾಣದಲ್ಲಿ ಜೂನ್ 1ರಂದು ಎರಡನೇ ಕ್ವಾಲಿಫೈಯರ್ ಕೂಡ ನಡೆಯಲಿದೆ. </p><p>ಮೊದಲ ಕ್ವಾಲಿಫೈಯರ್ (ಮೇ 29) ಮತ್ತು ಎಲಿಮಿನೇಟರ್ (ಮೇ 30) ಪಂದ್ಯಗಳು ಚಂಡೀಗಡದ ಮುಲ್ಲನಪುರದಲ್ಲಿ ನಡೆಯಲಿವೆ. </p><p>2022 ಮತ್ತು 2023ರ ಆವೃತ್ತಿಯ ಫೈನಲ್ಗಳನ್ನು ಅಹಮದಾಬಾದಿನಲ್ಲಿ ಆಯೋಜಿಸಲಾಗಿತ್ತು. </p><p>‘ಹವಾಮಾನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ತಾಣಗಳನ್ನು ನಿಗದಿಪಡಿಸಲಾಗಿದೆ. ಪ್ಲೇಆಫ್ ಹಂತ ಮತ್ತು ಮಂಗಳವಾರದಿಂದ ನಡೆಯುವ ಲೀಗ್ ಪಂದ್ಯಗಳಿಗೆ ಪ್ಲೇಯಿಂಗ್ ಕಂಡಿಷನ್ ನಿಯಮದಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. </p><p>ಈ ಮೊದಲಿನ ವೇಳಾಪಟ್ಟಿಯ ಪ್ರಕಾರ ಫೈನಲ್ ಪಂದ್ಯವು ಮೇ 25ರಂದು ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ನಡೆಯಬೇಕಿತ್ತು. </p>.<ul><li><p>23ರಂದು ಲಖನೌದಲ್ಲಿ <strong>ಆರ್ಸಿಬಿ– ಎಸ್ಆರ್ಎಚ್</strong> ಮುಖಾಮುಖಿ</p></li><li><p>ಅಹಮದಾಬಾದಿನಲ್ಲಿ ಜೂನ್ 3ರಂದು <strong>ಫೈನಲ್</strong> ಹಣಾಹಣಿ</p></li><li><p>ಮುಲ್ಲನಪುರದಲ್ಲಿ <strong>ಮೊದಲ ಕ್ವಾಲಿಫೈಯರ್, ಎಲಿಮಿನೇಟರ್</strong></p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>