ಆದ್ದರಿಂದ ಪಂದ್ಯದ ಕೊನೆಯ ದಿನವಾದ ಗುರುವಾರ ರಕ್ಷಣಾತ್ಮಕವಾಗಿ ಆಡಬೇಕಿತ್ತು. ಆರ್. ಸ್ಮರಣ್ ಮತ್ತು ಕೃತಿಕ್ ಕೃಷ್ಣ ತಾಳ್ಮೆಯಿಂದ ರಾಜಸ್ಥಾನ ಬೌಲರ್ಗಳ ಸವಾಲು ಎದುರಿಸಿದರು. ಈ ಜೋಡಿ ಆರನೇ ವಿಕೆಟ್ ಜೊತೆಯಾಟದಲ್ಲಿ 155 ರನ್ ಕಲೆಹಾಕಿತು. ಇನಿಂಗ್ಸ್ ಮುನ್ನಡೆ ಪಡೆದ ರಾಜಸ್ಥಾನ ತಂಡಕ್ಕೆ ಮೂರು, ಕರ್ನಾಟಕ ತಂಡಕ್ಕೆ ಒಂದು ಅಂಕ ಲಭಿಸಿದವು.