<p><strong>ನವದೆಹಲಿ:</strong> ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಏಕ ದಿನ ಕ್ರಿಕೆಟ್ ಜೀವನವೂ ‘ಶೀಘ್ರವೇ ಅಂತ್ಯಗೊಳ್ಳಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.</p>.<p>ಸಿಎನ್ಎನ್ ನ್ಯೂಸ್ 18 ಜೊತೆ ಮಾತನಾಡಿದ ಶಾಸ್ತ್ರಿ, ‘ನಾನು ಧೋನಿ ಜೊತೆ ಚರ್ಚಿಸಿದ್ದೇನೆ. ಅವರ ಟೆಸ್ಟ್ ಬಾಳ್ವೆ ಕೊನೆಗೊಂಡಿದೆ. ಅವರು ಏಕ ದಿನ ಕ್ರಿಕೆಟ್ ಜೀವನವನ್ನೂ ಶೀಘ್ರದಲ್ಲೇ ಕೊನೆಗೊಳಿಸಬಹುದು’ ಎಂದು ಶಾಸ್ತ್ರಿ ಹೇಳಿದರು.</p>.<p>‘ಅವರು ದೀರ್ಘ ಸಮಯದಿಂದ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ನಿರಂತರ ವಾಗಿ ಆಡುತ್ತಾ ಬಂದಿದ್ದಾರೆ. ಇದನ್ನು ಜನರು ಗೌರವಿಸಬೇಕು’ ಎಂದರು.</p>.<p>‘ಈ ವಯಸ್ಸಿನಲ್ಲಿ ಅವರು ಆಡ ಬಯಸುವ ಒಂದೇ ಮಾದರಿಯೆಂದರೆ ಅದು ಟಿ–20 ಮಾತ್ರ. ಇದಕ್ಕಾಗಿ ಅವರು ದೀರ್ಘ ಅವಧಿಯ ಮತ್ತೆ ಆಡಬೇಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವುದರಿಂದ, ದೇಹ ಹೇಗೆ ಸ್ಪಂದಿಸಬಹುದು ಎಂಬುದನ್ನು ಕಂಡುಕೊಳ್ಳಲು ಅವರು ಬಯಸಬಹುದು’ ಎಂದರು.</p>.<p>‘ಐಪಿಎಲ್ನಲ್ಲಿ ಚೆನ್ನಾಗಿ ಆಡಿದರೆ ಟಿ–20 ವಿಶ್ವಕಪ್ ತಂಡಕ್ಕೆ ಧೋನಿ ಈಗಲೂ ಆಕಾಂಕ್ಷಿ ಆಗಬಲ್ಲರು’ ಎಂದು ಶಾಸ್ತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಏಕ ದಿನ ಕ್ರಿಕೆಟ್ ಜೀವನವೂ ‘ಶೀಘ್ರವೇ ಅಂತ್ಯಗೊಳ್ಳಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.</p>.<p>ಸಿಎನ್ಎನ್ ನ್ಯೂಸ್ 18 ಜೊತೆ ಮಾತನಾಡಿದ ಶಾಸ್ತ್ರಿ, ‘ನಾನು ಧೋನಿ ಜೊತೆ ಚರ್ಚಿಸಿದ್ದೇನೆ. ಅವರ ಟೆಸ್ಟ್ ಬಾಳ್ವೆ ಕೊನೆಗೊಂಡಿದೆ. ಅವರು ಏಕ ದಿನ ಕ್ರಿಕೆಟ್ ಜೀವನವನ್ನೂ ಶೀಘ್ರದಲ್ಲೇ ಕೊನೆಗೊಳಿಸಬಹುದು’ ಎಂದು ಶಾಸ್ತ್ರಿ ಹೇಳಿದರು.</p>.<p>‘ಅವರು ದೀರ್ಘ ಸಮಯದಿಂದ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ನಿರಂತರ ವಾಗಿ ಆಡುತ್ತಾ ಬಂದಿದ್ದಾರೆ. ಇದನ್ನು ಜನರು ಗೌರವಿಸಬೇಕು’ ಎಂದರು.</p>.<p>‘ಈ ವಯಸ್ಸಿನಲ್ಲಿ ಅವರು ಆಡ ಬಯಸುವ ಒಂದೇ ಮಾದರಿಯೆಂದರೆ ಅದು ಟಿ–20 ಮಾತ್ರ. ಇದಕ್ಕಾಗಿ ಅವರು ದೀರ್ಘ ಅವಧಿಯ ಮತ್ತೆ ಆಡಬೇಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವುದರಿಂದ, ದೇಹ ಹೇಗೆ ಸ್ಪಂದಿಸಬಹುದು ಎಂಬುದನ್ನು ಕಂಡುಕೊಳ್ಳಲು ಅವರು ಬಯಸಬಹುದು’ ಎಂದರು.</p>.<p>‘ಐಪಿಎಲ್ನಲ್ಲಿ ಚೆನ್ನಾಗಿ ಆಡಿದರೆ ಟಿ–20 ವಿಶ್ವಕಪ್ ತಂಡಕ್ಕೆ ಧೋನಿ ಈಗಲೂ ಆಕಾಂಕ್ಷಿ ಆಗಬಲ್ಲರು’ ಎಂದು ಶಾಸ್ತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>