ಇದು ಧೋನಿ ಅವರ ಕೊನೆಯ ಐಪಿಎಲ್ ಪಂದ್ಯಾವಳಿ ಆಗಿರಲಿದೆ ಎಂಬ ವದಂತಿಗಳು ಹಬ್ಬಿವೆ.
ಸಿಎಸ್ಕೆಯ ಮೊದಲ ಬ್ಯಾಚ್ ಶುಕ್ರವಾರವೇ ಚೆನ್ನೈ ತಲುಪಿದ್ದು, ಶನಿವಾರದಿಂದ ತರಬೇತಿ ಶಿಬಿರ ಆರಂಭವಾಗಿದೆ.
ದೀಪಕ್ ಚಹಾರ್, ರುತುರಾಜ್ ಗಾಯಕ್ವಾಡ್, ಸಿಮರ್ಜಿತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಮುಕೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಅಜಯ್ ಮಂಡಲ್, ಶೇಖ್ ರಶೀದ್ ಮತ್ತು ನಿಶಾಂತ್ ಸಿಂದು ತರಬೇತಿ ಶಿಬಿರ ಸೇರಿದ್ದಾರೆ.
ಮಾರ್ಚ್ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ಚೆನ್ನೈ ತನ್ನ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.