ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಕ್ರಿಕೆಟ್ ಮೈದಾನದಲ್ಲಿ ಅಂಪೈರ್ಗಳು ಅದೆಂತಹ ಸಂದರ್ಭ ಬಂದರೂ ಸಂಯಮ ಕಾಯ್ದುಕೊಳ್ಳುತ್ತಾರೆ. ಆಟಗಾರರ ಅಸಮಾಧಾನ, ಸಿಟ್ಟು, ಬೈಗುಳ.. ಹೀಗೆ ಎಂತಹ ಸಂದರ್ಭದಲ್ಲೂ ಅಂಪೈರ್ಗಳು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ, ಈ ಪಂದ್ಯದಲ್ಲಿ ಆಟಗಾರನೊಬ್ಬ ಎಸೆದ ಚೆಂಡು ಅಂಪೈರ್ ಅಲೀಂ ಧರ್ ಅವರ ಕಾಲಿಗೆ ಬಡಿದು ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.