<p><strong>ನವದೆಹಲಿ:</strong> ಭಾರತ ಟೆಸ್ಟ್ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಲಹೆ ಮಾಡಿದ್ದಾರೆ.</p>.<p>ಈ ಕುರಿತು ಹೊಸತಾದ ಸ್ಪೋಟ್ಸ್18 ಕ್ರೀಡಾ ಚಾನೆಲ್ನ 'ಹೋಮ್ ಆಫ್ ಹೀರೊಸ್' ಕಾರ್ಯಕ್ರಮದಲ್ಲಿ ಯುವಿ ಪ್ರತಿಕ್ರಿಯಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/ipl-2022-rcb-vs-rr-verbal-exchange-of-words-between-riyan-parag-and-harshal-patel-931950.html" itemprop="url">IPL 2022: ಹರ್ಷಲ್ ಪಟೇಲ್ - ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ </a></p>.<p>'ಟೆಸ್ಟ್ ತಂಡಕ್ಕೆ ನೀವು ಯಾರನ್ನಾದರೂ ಸಿದ್ಧಗೊಳಿಸಬೇಕು. ಮಹೇಂದ್ರ ಸಿಂಗ್ ಧೋನಿಯನ್ನು ನಾಯಕರನ್ನಾಗಿ ಮಾಡಿದಂತೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು. ಬಳಿಕ ಅವರು (ಧೋನಿ) ನಾಯಕರಾಗಿ ಬೆಳೆದರು' ಎಂದು ಹೇಳಿದ್ದಾರೆ.</p>.<p>'ವಿಕೆಟ್ ಕೀಪರ್ ಯಾವಾಗಲೂ ಉತ್ತಮ ಚಿಂತಕನಾಗಿರುತ್ತಾನೆ. ಏಕೆಂದರೆ ಮೈದಾನದಲ್ಲಿ ವಿಕೆಟ್ ಹಿಂದೆ ನಿಂತುಕೊಂಡು ಪಂದ್ಯದ ಮೇಲೆ ಉತ್ತಮ ನೋಟವನ್ನು ಹೊಂದಿರುತ್ತಾನೆ' ಎಂದು ತಿಳಿಸಿದ್ದಾರೆ.</p>.<p>'ಭವಿಷ್ಯದ ನಾಯಕನಾಗಬಲ್ಲ ಯುವ ಆಟಗಾರನನ್ನು ಆರಿಸಿರಿ. ಅವರಿಗೆ ಸಮಯವನ್ನು ನೀಡಿ. ಮೊದಲ ಒಂದು ವರ್ಷದಲ್ಲಿ ಅದ್ಭುತಗಳನ್ನು ನಿರೀಕ್ಷಿಸಬೇಡಿ. ಯುವ ಆಟಗಾರನ ಮೇಲೆ ನೀವು ನಂಬಿಕೆಯನ್ನಿಡಬೇಕು' ಎಂದು ಹೇಳಿದರು.</p>.<p>'ನಾಯಕ ಸ್ಥಾನಕ್ಕೆ ಪಂತ್ ಅಪಕ್ವ ಎಂಬ ಟೀಕೆಗಳಿಗೆ ಉತ್ತರಿಸಿದ ಯುವಿ, ಆ ವಯಸ್ಸಿನಲ್ಲಿ ನಾನು ಅಪ್ರಬುದ್ಧನಾಗಿದ್ದೆ, ವಿರಾಟ್ ಕೊಹ್ಲಿ ಅಪಕ್ವರಾಗಿದ್ದರು. ಪಂತ್ ಕೂಡ ಸಮಯಕ್ಕೆ ತಕ್ಕಂತೆ ಪ್ರಬುದ್ಧರಾಗುತ್ತಿದ್ದಾರೆ. ಭಾರತದ ಟೆಸ್ಟ್ ತಂಡವನ್ನು ಮುನ್ನಡೆಸಲು ಪಂತ್ ಸೂಕ್ತ ಆಟಗಾರ ಎಂಬುದು ನನ್ನ ನಂಬಿಕೆ' ಎಂದು ಹೇಳಿದ್ದಾರೆ.</p>.<p>ರಿಷಭ್ ಪಂತ್, ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಟೆಸ್ಟ್ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಲಹೆ ಮಾಡಿದ್ದಾರೆ.</p>.<p>ಈ ಕುರಿತು ಹೊಸತಾದ ಸ್ಪೋಟ್ಸ್18 ಕ್ರೀಡಾ ಚಾನೆಲ್ನ 'ಹೋಮ್ ಆಫ್ ಹೀರೊಸ್' ಕಾರ್ಯಕ್ರಮದಲ್ಲಿ ಯುವಿ ಪ್ರತಿಕ್ರಿಯಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/ipl-2022-rcb-vs-rr-verbal-exchange-of-words-between-riyan-parag-and-harshal-patel-931950.html" itemprop="url">IPL 2022: ಹರ್ಷಲ್ ಪಟೇಲ್ - ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ </a></p>.<p>'ಟೆಸ್ಟ್ ತಂಡಕ್ಕೆ ನೀವು ಯಾರನ್ನಾದರೂ ಸಿದ್ಧಗೊಳಿಸಬೇಕು. ಮಹೇಂದ್ರ ಸಿಂಗ್ ಧೋನಿಯನ್ನು ನಾಯಕರನ್ನಾಗಿ ಮಾಡಿದಂತೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು. ಬಳಿಕ ಅವರು (ಧೋನಿ) ನಾಯಕರಾಗಿ ಬೆಳೆದರು' ಎಂದು ಹೇಳಿದ್ದಾರೆ.</p>.<p>'ವಿಕೆಟ್ ಕೀಪರ್ ಯಾವಾಗಲೂ ಉತ್ತಮ ಚಿಂತಕನಾಗಿರುತ್ತಾನೆ. ಏಕೆಂದರೆ ಮೈದಾನದಲ್ಲಿ ವಿಕೆಟ್ ಹಿಂದೆ ನಿಂತುಕೊಂಡು ಪಂದ್ಯದ ಮೇಲೆ ಉತ್ತಮ ನೋಟವನ್ನು ಹೊಂದಿರುತ್ತಾನೆ' ಎಂದು ತಿಳಿಸಿದ್ದಾರೆ.</p>.<p>'ಭವಿಷ್ಯದ ನಾಯಕನಾಗಬಲ್ಲ ಯುವ ಆಟಗಾರನನ್ನು ಆರಿಸಿರಿ. ಅವರಿಗೆ ಸಮಯವನ್ನು ನೀಡಿ. ಮೊದಲ ಒಂದು ವರ್ಷದಲ್ಲಿ ಅದ್ಭುತಗಳನ್ನು ನಿರೀಕ್ಷಿಸಬೇಡಿ. ಯುವ ಆಟಗಾರನ ಮೇಲೆ ನೀವು ನಂಬಿಕೆಯನ್ನಿಡಬೇಕು' ಎಂದು ಹೇಳಿದರು.</p>.<p>'ನಾಯಕ ಸ್ಥಾನಕ್ಕೆ ಪಂತ್ ಅಪಕ್ವ ಎಂಬ ಟೀಕೆಗಳಿಗೆ ಉತ್ತರಿಸಿದ ಯುವಿ, ಆ ವಯಸ್ಸಿನಲ್ಲಿ ನಾನು ಅಪ್ರಬುದ್ಧನಾಗಿದ್ದೆ, ವಿರಾಟ್ ಕೊಹ್ಲಿ ಅಪಕ್ವರಾಗಿದ್ದರು. ಪಂತ್ ಕೂಡ ಸಮಯಕ್ಕೆ ತಕ್ಕಂತೆ ಪ್ರಬುದ್ಧರಾಗುತ್ತಿದ್ದಾರೆ. ಭಾರತದ ಟೆಸ್ಟ್ ತಂಡವನ್ನು ಮುನ್ನಡೆಸಲು ಪಂತ್ ಸೂಕ್ತ ಆಟಗಾರ ಎಂಬುದು ನನ್ನ ನಂಬಿಕೆ' ಎಂದು ಹೇಳಿದ್ದಾರೆ.</p>.<p>ರಿಷಭ್ ಪಂತ್, ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>