ಮಂಗಳವಾರ ಈ ಕುರಿತು ಬಿಸಿಸಿಐ ಟ್ವಿಟರ್ನಲ್ಲಿ ಹಾಕಿರುವ ವಿಡಿಯೊದಲ್ಲಿ ದ್ರಾವಿಡ್, ’ಶ್ವೇತವರ್ಣದ ಚೆಂಡಿನ ಕ್ರಿಕೆಟ್ನಲ್ಲಿ ಭಾರತವು ಬಹಳಷ್ಟು ಯಶಸ್ಸು ಗಳಿಸಿದೆ. ಅದರಲ್ಲಿ ಕಾರಣಕರ್ತರಾದವರಲ್ಲಿ ರೈನಾ ಕೂಡ ಒಬ್ಬರು. ಸೀಮಿತ ಓವರ್ಗಳ ಕ್ರಿಕೆಟ್ಗೆ ಅವರು ಅಮೋಘವಾದ ಕಾಣಿಕೆ ನೀಡಿದ್ದಾರೆ. ವಿಶ್ವಕಪ್ ವಿಜೇತ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಗಳದಲ್ಲಿ ಅವರ ಚುರುಕುತನ ಮತ್ತು ಜಯಿಸುವ ಛಲದ ಆಟಗಳು ಅನುಕರಣೀಯವಾಗಿದ್ದವು. ಫೀಲ್ಡಿಂಗ್ನಲ್ಲಿ ಅವರ ದಿಟ್ಟತನ ನಿಜಕ್ಕೂ ಶ್ಲಾಘನೀಯ‘ ಎಂದು ದ್ರಾವಿಡ್ ಹೇಳಿದ್ದಾರೆ.