ಆತಿಥೇಯ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಆರಂಭದಲ್ಲಿಯೇ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿ ಕೊಟ್ಟ ಆಘಾತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕುಸಿಯುವ ಆತಂಕ ಎದುರಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಲಯಕ್ಕೆ ಮರಳಿದ ನಾಯಕ ಫಫ್ ಡುಪ್ಲೆಸಿ (61 ರನ್) ಮತ್ತು ರಜತ್ ಪಾಟೀದಾರ್ (50 ರನ್) ತಂಡಕ್ಕೆ ಬಲು ತುಂಬಿದರು. ಅವರು ಹಾಕಿದ ಅಡಿಪಾಯದ ಮೇಲೆ ದಿನೇಶ್ ಕಾರ್ತಿಕ್ (ಔಟಾಗದೆ 53) ದೊಡ್ಡ ಮೊತ್ತದ ಮಹಲು ಕಟ್ಟಿದರು.