ಭ್ರಷ್ಟಾಚಾರ ಮತ್ತು ವಿವಾದಗ್ರಸ್ತವಾಗಿದೆ ಎಂದು ದೆಹಲಿ ಕ್ರಿಕೆಟ್ ಸಂಸ್ಥೆಯನ್ನು ಟೀಕಿಸಿದ್ದ ಬೇಡಿ ಅವರು, ಆಡಳಿತಗಾರನ ಬದಲು ಸ್ಫೂರ್ತಿದಾಯಕ ಆಟಗಾರನೊಬ್ಬನ ಪ್ರತಿಮೆಯನ್ನು ಅನಾವರಣಗೊಳಿಸಬೇಕಿತ್ತು ಎಂದಿದ್ದರು. ಕ್ರೀಡಾಂಗಣದ ಸ್ಟ್ಯಾಂಡ್ ಒಂದಕ್ಕೆ ಇಟ್ಟಿರುವ ತಮ್ಮ ಹೆಸರನ್ನು ತೆಗೆದುಹಾಕುವಂತೆಯೂ ಪತ್ರಮುಖೇನ ಒತ್ತಾಯಿಸಿದ್ದರು.
ಇತ್ತೀಚೆಗಷ್ಟೇ ಡಿಡಿಸಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹನ್, ‘ಬೇಡಿ ಈ ವಿಷಯವನ್ನು ತಮ್ಮ ಜೊತೆ ವೈಯಕ್ತಿಕವಾಗಿ ಚರ್ಚಿಸುವುದಕ್ಕೆ ತಮ್ಮ ಸಹಮತವಿತ್ತು. ಅದನ್ನು ಬಿಟ್ಟು ತಮ್ಮ ತಂದೆಯ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಬಾರದಿತ್ತು’ ಎಂದು ಹೇಳಿದ್ದಾರೆ.