ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಲಾಯಿತು.
ಮುಂಬೈ ಮೂಲದವರೇ ಆದ ಸಚಿನ್, ಭಾರತದ ಕ್ರಿಕೆಟ್ ಏಳಿಗೆಯಲ್ಲಿ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇದೇ ಮೈದಾನದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ಕ್ರಿಕೆಟ್ ಪಯಣವನ್ನು ಸ್ಮರಣೀಯವಾಗಿಸಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿನ್, 'ಈ ಪ್ರತಿಮೆ ಕೇವಲ ನನಗೆ ಮಾತ್ರ ಸೇರಿದ್ದಲ್ಲ. ನನ್ನ ಪರವಾಗಿ ನಿಂತ ಪ್ರತಿಯೊಬ್ಬ ನಾನ್-ಸ್ಟ್ರೈಕರ್, ಕ್ರಿಕೆಟ್ ಹೀರೊಗಳು, ಸಹ ಆಟಗಾರರು, ಸಹೋದ್ಯೋಗಿಗಳಿಗೆ ನಾನು ಇದನ್ನು ಅರ್ಪಿಸುತ್ತೇನೆ. ಏಕೆಂದರೆ ಅವರಿಲ್ಲದೆ ಈ ಪ್ರಯಣ ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.