<p><strong>ಬೆಂಗಳೂರು</strong>: ಕರ್ನಾಟಕ ಕ್ರಿಕೆಟ್ ತಂಡದ ವಿಕೆಟ್ಕೀಪರ್ –ಬ್ಯಾಟರ್ ಶರತ್ ಶ್ರೀನಿವಾಸ್ ಅವರು ಇದೇ ದೇಶಿ ಋತುವಿನಿಂದ ತ್ರಿಪುರ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. </p>.<p>ಅವರು ತವರಿನ ತಂಡದಿಂದ ತ್ರಿಪುರಕ್ಕೆ ವರ್ಗಾವಣೆಯಾಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಯು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. </p>.<p>‘ಮೂರು ಮಾದರಿಗಳಲ್ಲಿಯೂ ಕ್ರಿಕೆಟ್ ಆಡುವ ಅವಕಾಶಕ್ಕಾಗಿ ತ್ರಿಪುರ ತಂಡಕ್ಕೆ ವಲಸೆ ಹೋಗುತ್ತಿರುವೆ. ಬೇರೆ ಯಾವುದೇ ಕಾರಣಗಳೂ ಇಲ್ಲ. ಕರ್ನಾಟಕ ತಂಡದಲ್ಲಿ ನನಗೆ ಎಲ್ಲ ರೀತಿಯ ಬೆಂಬಲ ಮತ್ತು ಮಾರ್ಗದರ್ಶನ ದೊರೆತಿದೆ’ ಎಂದು 28 ವರ್ಷದ ಶರತ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>2018ರಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಶರತ್ ಪದಾರ್ಪಣೆ ಮಾಡಿದ್ದರು. 20 ಪ್ರಥಮ ದರ್ಜೆ ಪಂದ್ಯಗಳಿಂದ 943 ರನ್ ಗಳಿಸಿದ್ದಾರೆ. ಅದರಲ್ಲ ಒಂದು ಶತಕ ಮತ್ತು 4 ಅರ್ಧಶತಕಗಳು ಇವೆ. 79 ಕ್ಯಾಚ್ ಪಡೆದಿರುವ ಅವರು 5 ಸ್ಟಂಪಿಂಗ್ ಮಾಡಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದು, ಒಂದು ಅರ್ಧಶತಕ ಹೊಡೆದಿದ್ದಾರೆ. ಒಟ್ಟು 139 ರನ್ಗಳು ಅವರ ಖಾತೆಯಲ್ಲಿವೆ. </p>.<p>ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಕರ್ನಾಟಕ ಸಂಭವನೀಯರ ತಂಡವನ್ನು ಈಚೆಗೆ ಪ್ರಕಟಿಸಲಾಗಿತ್ತು. ಅದರಲ್ಲಿ 28 ವರ್ಷದ ಶರತ್ ಕೂಡ ಇದ್ದರು. ಅದೇ ತಂಡದಲ್ಲಿ ಉದಯೋನ್ಮುಖ ವಿಕೆಟ್ಕೀಪರ್ಗಳಾದ ಲವನೀತ್ ಸಿಸೊಡಿಯಾ, ಸುಜಯ್ ಸತೇರಿ ಹಾಗೂ ಕೃತಿಕ್ ಕೃಷ್ಣ ಸ್ಥಾನ ಪಡೆದಿದ್ದಾರೆ. </p>.<p>‘ಇದುವರೆಗೆ ದೀರ್ಘ ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದೆ. ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದು ನನ್ನ ಗುರಿ’ ಎಂದು ಶರತ್ ಹೇಳಿದರು. </p>.<p>‘ಶರತ್ ಪ್ರತಿಭಾವಂತ ಆಟಗಾರ. ಅವರು ತ್ರಿಪುರ ತಂಡದಲ್ಲಿ ಆಡುವ ಇಚ್ಛೆ ಹೊಂದಿದ್ದು ಎನ್ಒಸಿ ನೀಡಲಾಗಿದೆ. ಕರ್ನಾಟಕ ತಂಡದಲ್ಲಿ ಉತ್ತಮ ಹಾಗೂ ಪ್ರತಿಭಾನ್ವಿತರಾದ ಮೂರ್ನಾಲ್ಕು ಜನ ವಿಕೆಟ್ಕೀಪರ್ಗಳು ಇದ್ದಾರೆ’ ಎಂದು ಕೆಎಸ್ಸಿಎ ಮೂಲಗಳು ಸ್ಪಷ್ಟಪಡಿಸಿವೆ. </p>.<p>ಈಚೆಗೆ ಆರಂಭಿಕ ಬ್ಯಾಟರ್ ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಅವರೂ ಪರರಾಜ್ಯಗಳ ತಂಡಗಳಿಗೆ ವಲಸೆ ಹೋಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಕ್ರಿಕೆಟ್ ತಂಡದ ವಿಕೆಟ್ಕೀಪರ್ –ಬ್ಯಾಟರ್ ಶರತ್ ಶ್ರೀನಿವಾಸ್ ಅವರು ಇದೇ ದೇಶಿ ಋತುವಿನಿಂದ ತ್ರಿಪುರ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. </p>.<p>ಅವರು ತವರಿನ ತಂಡದಿಂದ ತ್ರಿಪುರಕ್ಕೆ ವರ್ಗಾವಣೆಯಾಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಯು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. </p>.<p>‘ಮೂರು ಮಾದರಿಗಳಲ್ಲಿಯೂ ಕ್ರಿಕೆಟ್ ಆಡುವ ಅವಕಾಶಕ್ಕಾಗಿ ತ್ರಿಪುರ ತಂಡಕ್ಕೆ ವಲಸೆ ಹೋಗುತ್ತಿರುವೆ. ಬೇರೆ ಯಾವುದೇ ಕಾರಣಗಳೂ ಇಲ್ಲ. ಕರ್ನಾಟಕ ತಂಡದಲ್ಲಿ ನನಗೆ ಎಲ್ಲ ರೀತಿಯ ಬೆಂಬಲ ಮತ್ತು ಮಾರ್ಗದರ್ಶನ ದೊರೆತಿದೆ’ ಎಂದು 28 ವರ್ಷದ ಶರತ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>2018ರಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಶರತ್ ಪದಾರ್ಪಣೆ ಮಾಡಿದ್ದರು. 20 ಪ್ರಥಮ ದರ್ಜೆ ಪಂದ್ಯಗಳಿಂದ 943 ರನ್ ಗಳಿಸಿದ್ದಾರೆ. ಅದರಲ್ಲ ಒಂದು ಶತಕ ಮತ್ತು 4 ಅರ್ಧಶತಕಗಳು ಇವೆ. 79 ಕ್ಯಾಚ್ ಪಡೆದಿರುವ ಅವರು 5 ಸ್ಟಂಪಿಂಗ್ ಮಾಡಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದು, ಒಂದು ಅರ್ಧಶತಕ ಹೊಡೆದಿದ್ದಾರೆ. ಒಟ್ಟು 139 ರನ್ಗಳು ಅವರ ಖಾತೆಯಲ್ಲಿವೆ. </p>.<p>ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಕರ್ನಾಟಕ ಸಂಭವನೀಯರ ತಂಡವನ್ನು ಈಚೆಗೆ ಪ್ರಕಟಿಸಲಾಗಿತ್ತು. ಅದರಲ್ಲಿ 28 ವರ್ಷದ ಶರತ್ ಕೂಡ ಇದ್ದರು. ಅದೇ ತಂಡದಲ್ಲಿ ಉದಯೋನ್ಮುಖ ವಿಕೆಟ್ಕೀಪರ್ಗಳಾದ ಲವನೀತ್ ಸಿಸೊಡಿಯಾ, ಸುಜಯ್ ಸತೇರಿ ಹಾಗೂ ಕೃತಿಕ್ ಕೃಷ್ಣ ಸ್ಥಾನ ಪಡೆದಿದ್ದಾರೆ. </p>.<p>‘ಇದುವರೆಗೆ ದೀರ್ಘ ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದೆ. ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದು ನನ್ನ ಗುರಿ’ ಎಂದು ಶರತ್ ಹೇಳಿದರು. </p>.<p>‘ಶರತ್ ಪ್ರತಿಭಾವಂತ ಆಟಗಾರ. ಅವರು ತ್ರಿಪುರ ತಂಡದಲ್ಲಿ ಆಡುವ ಇಚ್ಛೆ ಹೊಂದಿದ್ದು ಎನ್ಒಸಿ ನೀಡಲಾಗಿದೆ. ಕರ್ನಾಟಕ ತಂಡದಲ್ಲಿ ಉತ್ತಮ ಹಾಗೂ ಪ್ರತಿಭಾನ್ವಿತರಾದ ಮೂರ್ನಾಲ್ಕು ಜನ ವಿಕೆಟ್ಕೀಪರ್ಗಳು ಇದ್ದಾರೆ’ ಎಂದು ಕೆಎಸ್ಸಿಎ ಮೂಲಗಳು ಸ್ಪಷ್ಟಪಡಿಸಿವೆ. </p>.<p>ಈಚೆಗೆ ಆರಂಭಿಕ ಬ್ಯಾಟರ್ ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಅವರೂ ಪರರಾಜ್ಯಗಳ ತಂಡಗಳಿಗೆ ವಲಸೆ ಹೋಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>