<p><strong>ನವದೆಹಲಿ</strong>: ವಿರಾಮದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನ ಒತ್ತಡಕ್ಕೆ ತಮ್ಮ ದೇಹ ಒಗ್ಗಿಕೊಳ್ಳುವುದೇ ಎಂಬುದು ಮಹೇಂದ್ರ ಸಿಂಗ್ ಧೋನಿ ಅವರಿಗಷ್ಟೇ ಗೊತ್ತಾಗಬಲ್ಲದು. ಮುಂದಿನ ವರ್ಷದ ಟಿ–20 ವಿಶ್ವಕಪ್ಗೆ ಕೆ.ಎಲ್.ರಾಹುಲ್ ಅವರೂ ಕೀಪಿಂಗ್ಗೆ ಗಂಭೀರ ಆಯ್ಕೆಯಾಗಬಲ್ಲರು– ಇದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಅವರ ಅಭಿಪ್ರಾಯ.</p>.<p>ರಿಷಭ್ ಪಂತ್ ಸಂಯಮ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದೂ ಹೇಳುತ್ತಾರೆ ಶಾಸ್ತ್ರಿ. ಪಂತ್ ಇತ್ತೀಚಿನ ಪಂದ್ಯಗಳಲ್ಲಿ ಭರವಸೆಗೆ ತಕ್ಕಂತೆ ಆಡುತ್ತಿಲ್ಲ. ಧೋನಿ ಅವರ ಪುನರಾಗಮನದ ಬಗ್ಗೆಯೂ ಸ್ಪಷ್ಟತೆ ಇಲ್ಲದಿರುವ ಕಾರಣ ರಾಹುಲ್ಗೆ ‘ಮಲ್ಟಿ ಟಾಸ್ಕಿಂಗ್’ ಪಾತ್ರ ವಹಿಸುವ ಸಾಧ್ಯತೆಯನ್ನು ಶಾಸ್ತ್ರಿ ತಳ್ಳಿಹಾಕಿಲ್ಲ.</p>.<p>‘ಧೋನಿ ವಿಶ್ರಾಂತಿ ಯೋಚನೆ ಸೂಕ್ತವಾದುದು. ಐಪಿಎಲ್ ಹತ್ತಿರವಿರುವಾಗ ಅವರ ಈ ಆಯ್ಕೆ ಸರಿಯಿದೆ. ಏಕದಿನ ಪಂದ್ಯಗಳಿಗೆ ಪುನರಾಗಮನ ಮಾಡಲು ಅವರಿಗೆ ತೀವ್ರ ಆಸಕ್ತಿಯಿದ್ದಂತಿಲ್ಲ. ಟೆಸ್ಟ್ಗೆ ಅವರು ವಿದಾಯ ಹೇಳಿದ್ದಾರೆ. ಟಿ–20 ಆಯ್ಕೆ ಅವರಿಗೆ ಇದೆ. ಈ ಮಾದರಿ ಅವರಿಗೆ ಒಗ್ಗುತ್ತದೆ. ಆದರೆ ಅವರ ದೇಹ ಕೇಳುವುದೇ ಎಂಬುದನ್ನು ಅವರೇ ಉತ್ತರಿಸಬೇಕಾ ಗುತ್ತದೆ’ ಎಂದು ‘ಇಂಡಿಯಾ ಟುಡೆ’ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ವಿಶ್ಲೇಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿರಾಮದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನ ಒತ್ತಡಕ್ಕೆ ತಮ್ಮ ದೇಹ ಒಗ್ಗಿಕೊಳ್ಳುವುದೇ ಎಂಬುದು ಮಹೇಂದ್ರ ಸಿಂಗ್ ಧೋನಿ ಅವರಿಗಷ್ಟೇ ಗೊತ್ತಾಗಬಲ್ಲದು. ಮುಂದಿನ ವರ್ಷದ ಟಿ–20 ವಿಶ್ವಕಪ್ಗೆ ಕೆ.ಎಲ್.ರಾಹುಲ್ ಅವರೂ ಕೀಪಿಂಗ್ಗೆ ಗಂಭೀರ ಆಯ್ಕೆಯಾಗಬಲ್ಲರು– ಇದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಅವರ ಅಭಿಪ್ರಾಯ.</p>.<p>ರಿಷಭ್ ಪಂತ್ ಸಂಯಮ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದೂ ಹೇಳುತ್ತಾರೆ ಶಾಸ್ತ್ರಿ. ಪಂತ್ ಇತ್ತೀಚಿನ ಪಂದ್ಯಗಳಲ್ಲಿ ಭರವಸೆಗೆ ತಕ್ಕಂತೆ ಆಡುತ್ತಿಲ್ಲ. ಧೋನಿ ಅವರ ಪುನರಾಗಮನದ ಬಗ್ಗೆಯೂ ಸ್ಪಷ್ಟತೆ ಇಲ್ಲದಿರುವ ಕಾರಣ ರಾಹುಲ್ಗೆ ‘ಮಲ್ಟಿ ಟಾಸ್ಕಿಂಗ್’ ಪಾತ್ರ ವಹಿಸುವ ಸಾಧ್ಯತೆಯನ್ನು ಶಾಸ್ತ್ರಿ ತಳ್ಳಿಹಾಕಿಲ್ಲ.</p>.<p>‘ಧೋನಿ ವಿಶ್ರಾಂತಿ ಯೋಚನೆ ಸೂಕ್ತವಾದುದು. ಐಪಿಎಲ್ ಹತ್ತಿರವಿರುವಾಗ ಅವರ ಈ ಆಯ್ಕೆ ಸರಿಯಿದೆ. ಏಕದಿನ ಪಂದ್ಯಗಳಿಗೆ ಪುನರಾಗಮನ ಮಾಡಲು ಅವರಿಗೆ ತೀವ್ರ ಆಸಕ್ತಿಯಿದ್ದಂತಿಲ್ಲ. ಟೆಸ್ಟ್ಗೆ ಅವರು ವಿದಾಯ ಹೇಳಿದ್ದಾರೆ. ಟಿ–20 ಆಯ್ಕೆ ಅವರಿಗೆ ಇದೆ. ಈ ಮಾದರಿ ಅವರಿಗೆ ಒಗ್ಗುತ್ತದೆ. ಆದರೆ ಅವರ ದೇಹ ಕೇಳುವುದೇ ಎಂಬುದನ್ನು ಅವರೇ ಉತ್ತರಿಸಬೇಕಾ ಗುತ್ತದೆ’ ಎಂದು ‘ಇಂಡಿಯಾ ಟುಡೆ’ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ವಿಶ್ಲೇಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>