ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಲವಲವಿಕೆಯಿಂದ, ನಗೆ ಚಟಾಕಿ ಹಾರಿಸುತ್ತ ಮಾತನಾಡಿದ ಆರ್ಷದೀಪ್, ‘ಆರಂಭಿಕ ಓವರ್ಗಳಲ್ಲಿ ಬಹಳಷ್ಟು ರನ್ ಕೊಟ್ಟಿದ್ದೆ. ನಾಯಕ ಮತ್ತು ನೆರವು ಸಿಬ್ಬಂದಿಯು ನನಗೆ ಇನ್ನೊಂದು ಅವಕಾಶ ಕೊಡಬೇಕು ಎಂಬ ನಂಬಿಕೆ ಇಟ್ಟಿತ್ತು. ಆಗೋದು ಆಗುತ್ತದೆ. ನೀನು ಬೌಲಿಂಗ್ ಮಾಡು ಎಂದು ಸೂರ್ಯ ಹುರುಪು ತುಂಬಿದರು’ ಎಂದರು.