ನಂತರದ ಬೆಳವಣಿಗೆಯಲ್ಲಿ ರಣಸಿಂಘೆ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಮಂಡಳಿ ವಜಾ ಆದೇಶ ಹಿಂಪಡೆಯಬೇಕೆಂಬ, ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಒತ್ತಾಯಕ್ಕೆ ರಣಸಿಂಘೆ ಮಣಿದಿರಲಿಲ್ಲ. ಕ್ರಿಕೆಟ್ ಮಂಡಳಿಯನ್ನು ಶುದ್ಧೀಕರಿಸುವ ತಮ್ಮ ಯತ್ನಕ್ಕೆ ಅಧ್ಯಕ್ಷರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದ ರಣಸಿಂಘೆ, ನಡುರಸ್ತೆಯಲ್ಲೇ ತಮ್ಮ ಹತ್ಯೆ ನಡೆದರೆ ಅದಕ್ಕೆ ಅಧ್ಯಕ್ಷ ಮತ್ತು ಸೇನೆಯ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದೂ ಹೇಳಿದ್ದರು.