<p><strong>ನವದೆಹಲಿ</strong>: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಹಿಮಾಚಲಪ್ರದೇಶ ತಂಡದ ಯುವವೇಗಿ ಸಿದ್ಧಾರ್ಥ್ ಶರ್ಮಾ ಅಲ್ಪಕಾಲದ ಅನಾರೋಗ್ಯದಿಂದಾಗಿ ಸಾವನ್ನಪ್ಪಿದರು. </p>.<p>ವಡೋದರಾದ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದರು. 28 ವರ್ಷದ ಸಿದ್ಧಾರ್ಥ್ ಅವರು ಹೋದ ವರ್ಷ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ತಂಡದಲ್ಲಿ ಆಡಿದ್ದರು. ಅವರು ಆರು ಪ್ರಥಮ ದರ್ಜೆ, ಒಂದು ಟಿ20 ಮತ್ತು ಆರು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು. ಒಟ್ಟು 33 ವಿಕೆಟ್ ಗಳಿಸಿದ್ದರು. </p>.<p>‘ಗುರುವಾರ ರಾತ್ರಿ ಸಿದ್ಧಾರ್ಥ್ ನಿಧನರಾದರು. ಅವರಿಗೆ ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಋತುವಿನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಅವರು ನಮ್ಮ ತಂಡದಲ್ಲಿದ್ದರು. ಆ ಪಂದ್ಯಕ್ಕೂ ಮುನ್ನ ಅವರು ವಾಂತಿ ಮಾಡಲಾರಂಭಿಸಿದ್ದರು. ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳೂ ಕಂಡುಬಂದವು. ಆದ್ದರಿಂದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಎಚ್ಪಿಸಿಎ ಕಾರ್ಯದರ್ಶಿ ಅವಿನಾಶ್ ಪರಮಾರ್ ತಿಳಿಸಿದರು. </p>.<p>ಸಿದ್ಧಾರ್ಥ್ ಅವರ ಪಾಲಕರು ಮತ್ತು ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ.</p>.<p>‘ವಿಷಯ ತಿಳಿದು ಕೆನಡಾದಿಂದ ಅವರ ಅಣ್ಣ ಬಂದಿದ್ದಾರೆ. ಇಂದು ಸಿದ್ಧಾರ್ಥ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು’ ಎಂದು ಪರಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಹಿಮಾಚಲಪ್ರದೇಶ ತಂಡದ ಯುವವೇಗಿ ಸಿದ್ಧಾರ್ಥ್ ಶರ್ಮಾ ಅಲ್ಪಕಾಲದ ಅನಾರೋಗ್ಯದಿಂದಾಗಿ ಸಾವನ್ನಪ್ಪಿದರು. </p>.<p>ವಡೋದರಾದ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದರು. 28 ವರ್ಷದ ಸಿದ್ಧಾರ್ಥ್ ಅವರು ಹೋದ ವರ್ಷ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ತಂಡದಲ್ಲಿ ಆಡಿದ್ದರು. ಅವರು ಆರು ಪ್ರಥಮ ದರ್ಜೆ, ಒಂದು ಟಿ20 ಮತ್ತು ಆರು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು. ಒಟ್ಟು 33 ವಿಕೆಟ್ ಗಳಿಸಿದ್ದರು. </p>.<p>‘ಗುರುವಾರ ರಾತ್ರಿ ಸಿದ್ಧಾರ್ಥ್ ನಿಧನರಾದರು. ಅವರಿಗೆ ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಋತುವಿನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಅವರು ನಮ್ಮ ತಂಡದಲ್ಲಿದ್ದರು. ಆ ಪಂದ್ಯಕ್ಕೂ ಮುನ್ನ ಅವರು ವಾಂತಿ ಮಾಡಲಾರಂಭಿಸಿದ್ದರು. ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳೂ ಕಂಡುಬಂದವು. ಆದ್ದರಿಂದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಎಚ್ಪಿಸಿಎ ಕಾರ್ಯದರ್ಶಿ ಅವಿನಾಶ್ ಪರಮಾರ್ ತಿಳಿಸಿದರು. </p>.<p>ಸಿದ್ಧಾರ್ಥ್ ಅವರ ಪಾಲಕರು ಮತ್ತು ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ.</p>.<p>‘ವಿಷಯ ತಿಳಿದು ಕೆನಡಾದಿಂದ ಅವರ ಅಣ್ಣ ಬಂದಿದ್ದಾರೆ. ಇಂದು ಸಿದ್ಧಾರ್ಥ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು’ ಎಂದು ಪರಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>