<p><strong>ಹುಬ್ಬಳ್ಳಿ</strong>: ಅಷ್ಟೇನು ಸವಾಲು ಅಲ್ಲದ ಗುರಿಯನ್ನು ಸುಲಭವಾಗಿ ಮುಟ್ಟಿದ ಉಡುಪಿ ಹಾಸ್ಟೆಟಲಿಟಿ ಸರ್ವಿಸ್ ತಂಡ, ಹುಬ್ಬಳ್ಳಿಯ ಅಸ್ತ್ರ ಇವೆಂಟ್ಸ್ ಆಯೋಜಿಸಿದ್ದಅಸ್ತ್ರ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಯಿತು.</p>.<p>ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಹೊನಲು ಬೆಳಕಿನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉಡುಪಿಯ ತಂಡ ಹುಬ್ಬಳ್ಳಿಯ ಸುಗ್ಗಿ ಸೂಪರ್ ಸ್ಟಾರ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿತು.</p>.<p>ಮೊದಲು ಬ್ಯಾಟ್ ಮಾಡಿದ ಸುಗ್ಗಿ ಸೂಪರ್ ಸ್ಟಾರ್ಸ್ ನಿಗದಿತ ಎಂಟು ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿತು. ಈ ಗುರಿಯನ್ನು ಉಡುಪಿಯ ತಂಡ 7.3 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ತಲುಪಿ ₹2.5 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ತಂಡಕ್ಕೆ ₹ 1.5 ಲಕ್ಷ ಲಭಿಸಿತು.</p>.<p>ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯಗಳಲ್ಲಿ ಉಡುಪಿ ತಂಡ, ಸುಗ್ಗಿ ಸೂಪರ್ ಸ್ಟಾರ್ಸ್ ಎದುರು ಗೆಲುವು ಪಡೆದರೆ, ಇನ್ನೊಂದು ಪಂದ್ಯದಲ್ಲಿ ಸೂಪರ್ ಸ್ಟಾರ್ಸ್, ಗೂಗ್ಲಿ ಪೊಳಲಿ ಟೈಗರ್ಸ್ ಎದುರು ವಿಜಯ ಸಾಧಿಸಿತು. ಎರಡು ದಿನ ನಡೆದ ಟೂರ್ನಿಯಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದವು.</p>.<p>ಉಡುಪಿ ತಂಡದ ರವಿ ಪಂದ್ಯ ಶ್ರೇಷ್ಠ, ರಕ್ಷಿತ್ ಶೆಟ್ಟಿ (ಅತ್ಯುತ್ತಮ ಬೌಲರ್), ಜೀವನ ಶೆಟ್ಟಿ (ಅತ್ಯುತ್ತಮ ಬ್ಯಾಟ್ಸ್ಮನ್) ಮತ್ತು ಸುಗ್ಗಿ ತಂಡದ ಪ್ರದೀಪ ಶೆಟ್ಟಿ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದರು.</p>.<p>ಸುಗ್ಗಿ ಸುಧಾಕರ ಶೆಟ್ಟಿ, ಸಚಿನ್ ಶಹಾ, ಬ್ರ್ಯಾನ್ ಡಿಸೋಜಾ, ಡಾ. ಬೇಲೂರು ರಾಘವೇಂದ್ರ ಶೆಟ್ಟಿ, ಸುಧೀರ ಶೆಟ್ಟಿ, ದಿನೇಶ ಶೆಟ್ಟಿ, ವೀರೇಂದ್ರ ಶೆಟ್ಟಿ, ಪುರಂದರ ರೈ, ಸಂತೋಷ ಶೆಟ್ಟಿ ಮತ್ತು ಶಿವಪ್ರಸಾದ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಅಷ್ಟೇನು ಸವಾಲು ಅಲ್ಲದ ಗುರಿಯನ್ನು ಸುಲಭವಾಗಿ ಮುಟ್ಟಿದ ಉಡುಪಿ ಹಾಸ್ಟೆಟಲಿಟಿ ಸರ್ವಿಸ್ ತಂಡ, ಹುಬ್ಬಳ್ಳಿಯ ಅಸ್ತ್ರ ಇವೆಂಟ್ಸ್ ಆಯೋಜಿಸಿದ್ದಅಸ್ತ್ರ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಯಿತು.</p>.<p>ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಹೊನಲು ಬೆಳಕಿನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉಡುಪಿಯ ತಂಡ ಹುಬ್ಬಳ್ಳಿಯ ಸುಗ್ಗಿ ಸೂಪರ್ ಸ್ಟಾರ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿತು.</p>.<p>ಮೊದಲು ಬ್ಯಾಟ್ ಮಾಡಿದ ಸುಗ್ಗಿ ಸೂಪರ್ ಸ್ಟಾರ್ಸ್ ನಿಗದಿತ ಎಂಟು ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿತು. ಈ ಗುರಿಯನ್ನು ಉಡುಪಿಯ ತಂಡ 7.3 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ತಲುಪಿ ₹2.5 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ತಂಡಕ್ಕೆ ₹ 1.5 ಲಕ್ಷ ಲಭಿಸಿತು.</p>.<p>ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯಗಳಲ್ಲಿ ಉಡುಪಿ ತಂಡ, ಸುಗ್ಗಿ ಸೂಪರ್ ಸ್ಟಾರ್ಸ್ ಎದುರು ಗೆಲುವು ಪಡೆದರೆ, ಇನ್ನೊಂದು ಪಂದ್ಯದಲ್ಲಿ ಸೂಪರ್ ಸ್ಟಾರ್ಸ್, ಗೂಗ್ಲಿ ಪೊಳಲಿ ಟೈಗರ್ಸ್ ಎದುರು ವಿಜಯ ಸಾಧಿಸಿತು. ಎರಡು ದಿನ ನಡೆದ ಟೂರ್ನಿಯಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದವು.</p>.<p>ಉಡುಪಿ ತಂಡದ ರವಿ ಪಂದ್ಯ ಶ್ರೇಷ್ಠ, ರಕ್ಷಿತ್ ಶೆಟ್ಟಿ (ಅತ್ಯುತ್ತಮ ಬೌಲರ್), ಜೀವನ ಶೆಟ್ಟಿ (ಅತ್ಯುತ್ತಮ ಬ್ಯಾಟ್ಸ್ಮನ್) ಮತ್ತು ಸುಗ್ಗಿ ತಂಡದ ಪ್ರದೀಪ ಶೆಟ್ಟಿ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದರು.</p>.<p>ಸುಗ್ಗಿ ಸುಧಾಕರ ಶೆಟ್ಟಿ, ಸಚಿನ್ ಶಹಾ, ಬ್ರ್ಯಾನ್ ಡಿಸೋಜಾ, ಡಾ. ಬೇಲೂರು ರಾಘವೇಂದ್ರ ಶೆಟ್ಟಿ, ಸುಧೀರ ಶೆಟ್ಟಿ, ದಿನೇಶ ಶೆಟ್ಟಿ, ವೀರೇಂದ್ರ ಶೆಟ್ಟಿ, ಪುರಂದರ ರೈ, ಸಂತೋಷ ಶೆಟ್ಟಿ ಮತ್ತು ಶಿವಪ್ರಸಾದ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>