<p><strong>ಬೆಂಗಳೂರು</strong>: ಆಲ್ರೌಂಡರ್ ಸುವೀಕ್ ಗಿಲ್ (35) ಅವರ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಅಂತಿಮ ದಿನವಾದ ಮಂಗಳವಾರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.</p>.<p>ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ 5 ವಿಕೆಟ್ಗೆ 243 ರನ್ ಗಳಿಸಿದ್ದ ಕರ್ನಾಟಕ ತಂಡವು 105.1 ಓವರ್ಗಳಲ್ಲಿ 314 ರನ್ಗಳಿಗೆ ಆಲೌಟ್ ಆಯಿತು. ಅದರೊಂದಿಗೆ, ಮೊದಲ ಇನಿಂಗ್ಸ್ನಲ್ಲಿ ಮಹತ್ವದ 22 ರನ್ ಮುನ್ನಡೆ ಪಡೆಯಿತು.</p>.<p>ಬಳಿಕ, ಎರಡನೇ ಇನಿಂಗ್ಸ್ನಲ್ಲಿ ಬಿರುಸಿನ ಆಟವಾಡಿದ ಮಧ್ಯಪ್ರದೇಶ ತಂಡವು 31 ಓವರ್ಗಳಲ್ಲಿ 4 ವಿಕೆಟ್ಗೆ 149 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಕುಶಾಗ್ರ ನಗರ್ 75 ಎಸೆತಗಳಲ್ಲಿ 79 ರನ್ ಸಿಡಿಸಿದರು. ಗೆಲುವಿಗೆ 128 ರನ್ ಗುರಿ ಪಡೆದ ಆರುಷ್ ಜೈನ್ ಪಡೆಯು ದಿನದಾಟದ ಅಂತ್ಯಕ್ಕೆ 22 ಓವರ್ಗಳಲ್ಲಿ 1 ವಿಕೆಟ್ಗೆ 65 ರನ್ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ 3 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಮಧ್ಯಪ್ರದೇಶ ತಂಡಕ್ಕೆ 1 ಅಂಕ ಸಿಕ್ಕಿತು.</p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಮಧ್ಯಪ್ರದೇಶ: 292; ಕರ್ನಾಟಕ: 105.1 ಓವರುಗಳಲ್ಲಿ 314 (ಆರ್ಯಸಿಂಹ್ ಚಾವ್ಡಾ 67, ಸುವಿಕ್ ಗಿಲ್ 35; ರಿತೀಕ್ ಪಾರಬ್ 87ಕ್ಕೆ3, ನೈತಿಕ್ ಜೈನ್ 100ಕ್ಕೆ3); ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 31 ಓವರುಗಳಲ್ಲಿ 4ಕ್ಕೆ 149 ಡಿ. (ಕುಶಾಗ್ರ ನಗರ್ 79, ಆರ್ಣವ್ ಮಸೀಹ ಔಟಾಗದೇ 33, ಆರುಷ್ ಜೈನ್ 32ಕ್ಕೆ2); ಕರ್ನಾಟಕ: 22 ಓವರುಗಳಲ್ಲಿ 1ಕ್ಕೆ 65 (ಆರ್.ರೋಹಿತ್ ರೆಡ್ಡಿ ಔಟಾಗದೇ 27, ಆರುಷ್ ಜೈನ್ ಔಟಾಗದೇ 30). ಫಲಿತಾಂಶ: ಪಂದ್ಯ ಡ್ರಾ; ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕಕ್ಕೆ 3 ಅಂಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆಲ್ರೌಂಡರ್ ಸುವೀಕ್ ಗಿಲ್ (35) ಅವರ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಅಂತಿಮ ದಿನವಾದ ಮಂಗಳವಾರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.</p>.<p>ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ 5 ವಿಕೆಟ್ಗೆ 243 ರನ್ ಗಳಿಸಿದ್ದ ಕರ್ನಾಟಕ ತಂಡವು 105.1 ಓವರ್ಗಳಲ್ಲಿ 314 ರನ್ಗಳಿಗೆ ಆಲೌಟ್ ಆಯಿತು. ಅದರೊಂದಿಗೆ, ಮೊದಲ ಇನಿಂಗ್ಸ್ನಲ್ಲಿ ಮಹತ್ವದ 22 ರನ್ ಮುನ್ನಡೆ ಪಡೆಯಿತು.</p>.<p>ಬಳಿಕ, ಎರಡನೇ ಇನಿಂಗ್ಸ್ನಲ್ಲಿ ಬಿರುಸಿನ ಆಟವಾಡಿದ ಮಧ್ಯಪ್ರದೇಶ ತಂಡವು 31 ಓವರ್ಗಳಲ್ಲಿ 4 ವಿಕೆಟ್ಗೆ 149 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಕುಶಾಗ್ರ ನಗರ್ 75 ಎಸೆತಗಳಲ್ಲಿ 79 ರನ್ ಸಿಡಿಸಿದರು. ಗೆಲುವಿಗೆ 128 ರನ್ ಗುರಿ ಪಡೆದ ಆರುಷ್ ಜೈನ್ ಪಡೆಯು ದಿನದಾಟದ ಅಂತ್ಯಕ್ಕೆ 22 ಓವರ್ಗಳಲ್ಲಿ 1 ವಿಕೆಟ್ಗೆ 65 ರನ್ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ 3 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಮಧ್ಯಪ್ರದೇಶ ತಂಡಕ್ಕೆ 1 ಅಂಕ ಸಿಕ್ಕಿತು.</p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಮಧ್ಯಪ್ರದೇಶ: 292; ಕರ್ನಾಟಕ: 105.1 ಓವರುಗಳಲ್ಲಿ 314 (ಆರ್ಯಸಿಂಹ್ ಚಾವ್ಡಾ 67, ಸುವಿಕ್ ಗಿಲ್ 35; ರಿತೀಕ್ ಪಾರಬ್ 87ಕ್ಕೆ3, ನೈತಿಕ್ ಜೈನ್ 100ಕ್ಕೆ3); ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 31 ಓವರುಗಳಲ್ಲಿ 4ಕ್ಕೆ 149 ಡಿ. (ಕುಶಾಗ್ರ ನಗರ್ 79, ಆರ್ಣವ್ ಮಸೀಹ ಔಟಾಗದೇ 33, ಆರುಷ್ ಜೈನ್ 32ಕ್ಕೆ2); ಕರ್ನಾಟಕ: 22 ಓವರುಗಳಲ್ಲಿ 1ಕ್ಕೆ 65 (ಆರ್.ರೋಹಿತ್ ರೆಡ್ಡಿ ಔಟಾಗದೇ 27, ಆರುಷ್ ಜೈನ್ ಔಟಾಗದೇ 30). ಫಲಿತಾಂಶ: ಪಂದ್ಯ ಡ್ರಾ; ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕಕ್ಕೆ 3 ಅಂಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>