'ಆರ್ಸಿಬಿ ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಪ್ರಭಾವ ಮತ್ತು ಕೊಡುಗೆಯನ್ನು ಮನಗಂಡಿದ್ದೇನೆ. ಇದು ಪ್ರಾಮಾಣಿಕ ಭಾವನೆ. ನಾನು ಹಾಗೂ ಅನುಷ್ಕಾ ಈ ಬಗ್ಗೆ ಮಾತನಾಡಿದ್ದೇವೆ. ಆಕೆ ಕೂಡ ನನ್ನ ಜೀವನದಲ್ಲಿ ಅಭಿಮಾನಿಗಳು ಬೀರಿರುವ ಪಾತ್ರವನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ' ಎಂದು ವಿರಾಟ್ ವಿವರಿಸಿದ್ದಾರೆ.
ಈಗ ಹಿಂತಿರುಗಿ ನೋಡಿದಾಗ, ಅಭಿಮಾನಿಗಳ ಬೆಂಬಲದಿಂದಲೇ ಕಠಿಣ ಪರಿಸ್ಥಿತಿಯಲ್ಲೂ ಏನೂ ಬೇಕಾದರೂ ಮಾಡಲು ಸಾಧ್ಯ ಎಂಬ ಧೈರ್ಯ ಮೂಡಿದೆ. ಅವರು (ಅಭಿಮಾನಿಗಳು) ನನ್ನಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಅದಕ್ಕಾಗಿ ಕೃತಜ್ಞನಾಗಿದ್ದೇನೆ. ಈಗ ಸ್ಟೇಡಿಯಂಗೆ ಅಭಿಮಾನಿಗಳು ಮರಳುತ್ತಿರುವುದರಿಂದ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.