<p><strong>ನವದೆಹಲಿ</strong>: ‘ಅಮಾನತಿನಲ್ಲಿರುವ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು,ಕೋವಿಡ್ ಪಿಡುಗಿನ ಹೊರತಾಗಿಯೂ ಹಮ್ಮಿಕೊಳ್ಳಲು ಇರುವ ಎಲ್ಲಾ ಮಾರ್ಗೋಪಾಯಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿದ್ದಾರೆ.</p>.<p>ಐಸಿಸಿ ಮಂಡಳಿ ಸಭೆಯ ನಂತರ ಬುಧವಾರ ರಾತ್ರಿ ಅವರು ಬಿಸಿಸಿಐ ಸಂಯೋಜಿತ ಘಟಕಗಳಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೊರೊನಾ ವೈರಸ್ ಹಾವಳಿಯಿಂದ ಐಪಿಎಲ್ ಅನ್ನು ಅನಿರ್ದಿಷ್ಟ ಅವಧಿಗೆ ಅಮಾನತಿನಲ್ಲಿಡಲಾಗಿದೆ. ಭಾರತದಲ್ಲಿ ಕೋವಿಡ್ ಪಿಡುಗಿಗೆ ಇದುವರೆಗೆ ಎಂಟು ಸಾವಿರ ಮಂದಿ ಮೃತರಾಗಿದ್ದಾರೆ.</p>.<p>‘ಈ ವರ್ಷವೂ ಐಪಿಎಲ್ ಹಮ್ಮಿಕೊಳ್ಳಲು ಸಿದ್ಧರಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ತನ್ನ ಮುಂದಿರುವ ಎಲ್ಲ ಇರುವ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವ ಆಯ್ಕೆಯೂ ಇದರಲ್ಲಿ ಒಂದು’ ಎಂದು ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ.</p>.<p>‘ಅಭಿಮಾನಿಗಳು, ಫ್ರಾಂಚೈಸ್ಗಳು, ಆಟಗಾರರು, ಪ್ರಸಾರ ಹಕ್ಕು ಪಡೆದವರು, ಪ್ರಾಯೋಜಕರು ಮತ್ತು ಇತರ ಭಾಗೀದಾರರು ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆಯನ್ನು ಕಾತರದಿಂದ ಎದುರುನೋಡುತ್ತಿದ್ದಾರೆ’ ಎಂದೂ ಗಂಗೂಲಿ ಉಲ್ಲೇಖಿಸಿದ್ದಾರೆ.</p>.<p>‘ಈ ವರ್ಷದ ಲೀಗ್ನಲ್ಲಿ ಭಾಗವಹಿಸಲು ಭಾರತ ಮತ್ತು ಇತರ ದೇಶಗಳ ಆಟಗಾರರು ಉತ್ಸುಕತೆ ತೋರಿದ್ದಾರೆ. ನಾವು ಆಶಾವಾದಿಗಳಾಗಿದ್ದೇವೆ. ಮುಂದಿನ ಕ್ರಮಗಳ ಬಗ್ಗೆ ಬಿಸಿಸಿಐ ಶೀಘ್ರವೇ ನಿರ್ಧಾರಕ್ಕೆ ಬರಲಿದೆ’ ಎಂದು ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗಂಗೂಲಿ ವಿವರಿಸಿದ್ದಾರೆ.</p>.<p>ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಮುಂದೂಡಿಕೆಯಾಗಬಹುದು, ಆ ಅವಧಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಕಣ್ಣಿಟ್ಟಿದೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಟಿ–20 ವಿಶ್ವಕಪ್ ಭವಿಷ್ಯವನ್ನು ಮುಂದಿನ ತಿಂಗಳು ನಿರ್ಧರಿಸಿರುವುದಾಗಿ ಐಸಿಸಿ ಬುಧವಾರ ಹೇಳಿದೆ. ಹೀಗಾಗಿ ಕುತೂಹಲ ಇನ್ನೂ ಉಳಿದಿದೆ.</p>.<p>ಇದರ ಜೊತೆಗೆ ದೇಶಿಯ ಟೂರ್ನಿಗಳ ವೇಳಾಪಟ್ಟಿಯ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ. ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ‘ಸ್ಪರ್ಧಾತ್ಮಕ ಮತ್ತು ಕಾರ್ಯಸಾಧು’ವಾಗಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.</p>.<p>ಮುಂದಿನ ಒಂದೆರಡು ವಾರಗಳಲ್ಲಿ ಬಿಸಿಸಿಐ ಹೆಚ್ಚಿನ ವಿವರಗಳನ್ನು ನೀಡಲಿದೆ ಎಂದಿದ್ದಾರೆ.</p>.<p><strong>ಬಿಸಿಸಿಐನಿಂದ ಎಸ್ಒಪಿ</strong></p>.<p>ರಾಜ್ಯಗಳಲ್ಲಿ ಕ್ರಿಕೆಟ್ ಚಟವಟಿಕೆ ಮರುಚಾಲನೆ ಪಡೆದುಕೊಳ್ಳುವಾಗ ಆರೋಗ್ಯ ಸುರಕ್ಷತೆಯನ್ನು ಪಾಲಿಸಲು, ಬಿಸಿಸಿಐ ಕಾರ್ಯನಿರ್ವಹಣಾ ಮಾನದಂಡಗಳನ್ನು (ಎಸ್ಒಪಿ) ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.</p>.<p>ತನ್ನ ಎಲ್ಲ ಸದಸ್ಯ ಸಂಸ್ಥೆಗಳಿಗೆ ನೆರವು, ಅನುದಾನ ಬಿಡುಗಡೆ ಮಾಡಲು ಬಿಸಿಸಿಐ ಎಲ್ಲಾ ಪ್ರಯತ್ನ ನಡೆಸಲಿದೆ. ಈಗಾಗಲೇ ಲೆಕ್ಕಪತ್ರ ಸಲ್ಲಿಸಿರುವ ಮತ್ತು ನೆರವು ಬಳಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿರುವ ಎಲ್ಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗಿದೆ ಎಂದಿದ್ದಾರೆ ಗಂಗೂಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಅಮಾನತಿನಲ್ಲಿರುವ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು,ಕೋವಿಡ್ ಪಿಡುಗಿನ ಹೊರತಾಗಿಯೂ ಹಮ್ಮಿಕೊಳ್ಳಲು ಇರುವ ಎಲ್ಲಾ ಮಾರ್ಗೋಪಾಯಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿದ್ದಾರೆ.</p>.<p>ಐಸಿಸಿ ಮಂಡಳಿ ಸಭೆಯ ನಂತರ ಬುಧವಾರ ರಾತ್ರಿ ಅವರು ಬಿಸಿಸಿಐ ಸಂಯೋಜಿತ ಘಟಕಗಳಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೊರೊನಾ ವೈರಸ್ ಹಾವಳಿಯಿಂದ ಐಪಿಎಲ್ ಅನ್ನು ಅನಿರ್ದಿಷ್ಟ ಅವಧಿಗೆ ಅಮಾನತಿನಲ್ಲಿಡಲಾಗಿದೆ. ಭಾರತದಲ್ಲಿ ಕೋವಿಡ್ ಪಿಡುಗಿಗೆ ಇದುವರೆಗೆ ಎಂಟು ಸಾವಿರ ಮಂದಿ ಮೃತರಾಗಿದ್ದಾರೆ.</p>.<p>‘ಈ ವರ್ಷವೂ ಐಪಿಎಲ್ ಹಮ್ಮಿಕೊಳ್ಳಲು ಸಿದ್ಧರಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ತನ್ನ ಮುಂದಿರುವ ಎಲ್ಲ ಇರುವ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವ ಆಯ್ಕೆಯೂ ಇದರಲ್ಲಿ ಒಂದು’ ಎಂದು ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ.</p>.<p>‘ಅಭಿಮಾನಿಗಳು, ಫ್ರಾಂಚೈಸ್ಗಳು, ಆಟಗಾರರು, ಪ್ರಸಾರ ಹಕ್ಕು ಪಡೆದವರು, ಪ್ರಾಯೋಜಕರು ಮತ್ತು ಇತರ ಭಾಗೀದಾರರು ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆಯನ್ನು ಕಾತರದಿಂದ ಎದುರುನೋಡುತ್ತಿದ್ದಾರೆ’ ಎಂದೂ ಗಂಗೂಲಿ ಉಲ್ಲೇಖಿಸಿದ್ದಾರೆ.</p>.<p>‘ಈ ವರ್ಷದ ಲೀಗ್ನಲ್ಲಿ ಭಾಗವಹಿಸಲು ಭಾರತ ಮತ್ತು ಇತರ ದೇಶಗಳ ಆಟಗಾರರು ಉತ್ಸುಕತೆ ತೋರಿದ್ದಾರೆ. ನಾವು ಆಶಾವಾದಿಗಳಾಗಿದ್ದೇವೆ. ಮುಂದಿನ ಕ್ರಮಗಳ ಬಗ್ಗೆ ಬಿಸಿಸಿಐ ಶೀಘ್ರವೇ ನಿರ್ಧಾರಕ್ಕೆ ಬರಲಿದೆ’ ಎಂದು ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗಂಗೂಲಿ ವಿವರಿಸಿದ್ದಾರೆ.</p>.<p>ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಮುಂದೂಡಿಕೆಯಾಗಬಹುದು, ಆ ಅವಧಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಕಣ್ಣಿಟ್ಟಿದೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಟಿ–20 ವಿಶ್ವಕಪ್ ಭವಿಷ್ಯವನ್ನು ಮುಂದಿನ ತಿಂಗಳು ನಿರ್ಧರಿಸಿರುವುದಾಗಿ ಐಸಿಸಿ ಬುಧವಾರ ಹೇಳಿದೆ. ಹೀಗಾಗಿ ಕುತೂಹಲ ಇನ್ನೂ ಉಳಿದಿದೆ.</p>.<p>ಇದರ ಜೊತೆಗೆ ದೇಶಿಯ ಟೂರ್ನಿಗಳ ವೇಳಾಪಟ್ಟಿಯ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ. ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ‘ಸ್ಪರ್ಧಾತ್ಮಕ ಮತ್ತು ಕಾರ್ಯಸಾಧು’ವಾಗಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.</p>.<p>ಮುಂದಿನ ಒಂದೆರಡು ವಾರಗಳಲ್ಲಿ ಬಿಸಿಸಿಐ ಹೆಚ್ಚಿನ ವಿವರಗಳನ್ನು ನೀಡಲಿದೆ ಎಂದಿದ್ದಾರೆ.</p>.<p><strong>ಬಿಸಿಸಿಐನಿಂದ ಎಸ್ಒಪಿ</strong></p>.<p>ರಾಜ್ಯಗಳಲ್ಲಿ ಕ್ರಿಕೆಟ್ ಚಟವಟಿಕೆ ಮರುಚಾಲನೆ ಪಡೆದುಕೊಳ್ಳುವಾಗ ಆರೋಗ್ಯ ಸುರಕ್ಷತೆಯನ್ನು ಪಾಲಿಸಲು, ಬಿಸಿಸಿಐ ಕಾರ್ಯನಿರ್ವಹಣಾ ಮಾನದಂಡಗಳನ್ನು (ಎಸ್ಒಪಿ) ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.</p>.<p>ತನ್ನ ಎಲ್ಲ ಸದಸ್ಯ ಸಂಸ್ಥೆಗಳಿಗೆ ನೆರವು, ಅನುದಾನ ಬಿಡುಗಡೆ ಮಾಡಲು ಬಿಸಿಸಿಐ ಎಲ್ಲಾ ಪ್ರಯತ್ನ ನಡೆಸಲಿದೆ. ಈಗಾಗಲೇ ಲೆಕ್ಕಪತ್ರ ಸಲ್ಲಿಸಿರುವ ಮತ್ತು ನೆರವು ಬಳಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿರುವ ಎಲ್ಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗಿದೆ ಎಂದಿದ್ದಾರೆ ಗಂಗೂಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>