ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರಿಗೆ ಟ್ವೆಂಟಿ–20 ಮಾದರಿಯ ಆಟಗಾರರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವಿದೆಯೇ ಎಂದು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
‘ಅವರು (ರಾಥೋಡ್) ನನ್ನ ಗೆಳೆಯ ಹೌದು. ಆದರೆ ಈ ಪ್ರಶ್ನೆಗಳನ್ನು ಕೇಳಲು ನನಗೆ ಹಿಂಜರಿಕೆ ಇಲ್ಲ. ಅವರಿಗೆ ಈಗಿನ ಚುಟುಕು ಕ್ರಿಕೆಟ್ ಪೀಳಿಗೆಗೆ ತರಬೇತಿ ನೀಡುವ ಸಾಮರ್ಥ್ಯ ಇದೆಯೇ? ಅವರು ಯಾವ ದರ್ಜೆಯ ಕ್ರಿಕೆಟ್ ಆಡಿದ್ದಾರೆ’ ಎಂದು ಇನ್ಸ್ಟಾಗ್ರಾಮ್ ಸಂವಾದದಲ್ಲಿ ಯುವಿ ಪ್ರಶ್ನಿಸಿದ್ದಾರೆ.