<p><strong>ಬೆಂಗಳೂರು: </strong>ಎರಡು ವರ್ಷಗಳ ಬಿಡುವಿನ ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ‘ಫುಟ್ಬಾಲ್ ಹಬ್ಬ’ ಮರಳಿದ್ದು, ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳ ಕುತೂಹಲ ಗರಿಗೆದರಿದೆ.</p>.<p>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ ಶನಿವಾರ, ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡವನ್ನು ಎದುರಿಸಲಿದೆ.</p>.<p>ಕೋವಿಡ್ ಕಾರಣ ಕಳೆದ ಎರಡು ಋತುಗಳಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಐಎಸ್ಎಲ್ ಪಂದ್ಯಗಳು ನಡೆದಿರಲಿಲ್ಲ. ಇದೀಗ ತವರು ನೆಲದಲ್ಲಿ ಆಡಲು ಅವಕಾಶ ಲಭಿಸಿರುವುದು ಬಿಎಫ್ಸಿ ಆಟಗಾರರ ಉತ್ಸಾಹ ಇಮ್ಮಡಿಗೊಳಿಸಿದೆ. ಮೊದಲ ಪಂದ್ಯದಲ್ಲಿ ಗೆದ್ದು, ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಸಕಾರಾತ್ಮಕವಾಗಿ ಆರಂಭಿಸುವ ವಿಶ್ವಾಸದಲ್ಲಿದೆ.</p>.<p>ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಆಡುವ ಅವಕಾಶ ಲಭಿಸಿರುವುದಕ್ಕೆ ಬಿಎಫ್ಸಿ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತು ಕೋಚ್ ಸೈಮನ್ ಗ್ರೇಸನ್ ಅವರು ಸಂತಸ ವ್ಯಕ್ತಪಡಿಸಿದ್ಧಾರೆ.</p>.<p>‘ಕಿಕ್ಕಿರಿದು ತುಂಬುವ ಪ್ರೇಕ್ಷಕರ ಬೆಂಬಲದೊಂದಿಗೆ ಇಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇವೆ. ಕೋವಿಡ್ಗೆ ಮುಂಚೆ ಇಲ್ಲಿ ಪಂದ್ಯ ನಡೆಯುತ್ತಿದ್ದಾಗ ಅನುಭವಿಸಿದ್ದ ಪ್ರತಿಯೊಂದು ಸುಂದರ ಕ್ಷಣಗಳೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ’ ಎಂದು ಚೆಟ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಕಳೆದ ಎರಡು ಋತುಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಬಿಎಫ್ಸಿ, ಈ ಬಾರಿ ಹೊಸ ಆಟಗಾರರನ್ನು ಸೇರಿಸಿಕೊಂಡು ಶಕ್ತಿಯನ್ನು ವೃದ್ದಿಸಿಕೊಂಡಿದೆ. ರಾಯ್ ಕೃಷ್ಣ, ಪ್ರಬೀರ್ ದಾಸ್ ಮತ್ತು ಜಾವಿ ಹೆರ್ನಾಂಡೆಸ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಸಂದೇಶ್ ಜಿಂಗಾನ್, ಅಲೆಕ್ಸಾಂಡರ್ ಜವನೊವಿಚ್ ಮತ್ತು ಹೀರಾ ಮೊಂಡಲ್ ಅವರು ರಕ್ಷಣಾ ವಿಭಾಗಕ್ಕೆ ಬಲ ತುಂಬಲಿದ್ದಾರೆ.</p>.<p>‘ಅಂತಿಮ ಇಲೆವೆನ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ಚೆಟ್ರಿ ನಗು ಬೀರಿದರು. ‘ಯಾರಿಗೆಲ್ಲಾ ಆಡುವ ಅವಕಾಶ ಲಭಿಸುತ್ತದೆ ಎಂಬುದು ಖಚಿತವಿಲ್ಲ. ತಂಡದಲ್ಲಿ ಅಷ್ಟೊಂದು ಪೈಪೋಟಿಯಿದೆ’ ಎಂದು ಹೇಳಿದರು.</p>.<p>ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ಕಳೆದ ಋತುವಿಗೆ ಹೋಲಿಸಿದರೆ, ತಂಡದಲ್ಲಿ ಬಾರಿ ಬದಲಾವಣೆಗಳನ್ನು ಮಾಡಿಕೊಂಡಿದೆ. ‘ಇದು ಕಠಿಣ ಪಂದ್ಯ ಎಂಬುದರ ಅರಿವಿದೆ. ಬಿಎಫ್ಸಿ ತಂಡ ಸಮತೋಲನದಿಂದ ಕೂಡಿದೆ. ಆದರೆ ನಾವು ತಕ್ಕ ಸಿದ್ಧತೆಯೊಂದಿಗೆ ಬಂದಿದ್ದೇವೆ’ ಎಂದು ತಂಡದ ಕೋಚ್ ಮಾರ್ಕೊ ಬಲ್ಬುಲ್ ತಿಳಿಸಿದರು.</p>.<p><strong>ಪಂದ್ಯ ಆರಂಭ: ಸಂಜೆ 7.30</strong></p>.<p><strong>ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎರಡು ವರ್ಷಗಳ ಬಿಡುವಿನ ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ‘ಫುಟ್ಬಾಲ್ ಹಬ್ಬ’ ಮರಳಿದ್ದು, ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳ ಕುತೂಹಲ ಗರಿಗೆದರಿದೆ.</p>.<p>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ ಶನಿವಾರ, ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡವನ್ನು ಎದುರಿಸಲಿದೆ.</p>.<p>ಕೋವಿಡ್ ಕಾರಣ ಕಳೆದ ಎರಡು ಋತುಗಳಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಐಎಸ್ಎಲ್ ಪಂದ್ಯಗಳು ನಡೆದಿರಲಿಲ್ಲ. ಇದೀಗ ತವರು ನೆಲದಲ್ಲಿ ಆಡಲು ಅವಕಾಶ ಲಭಿಸಿರುವುದು ಬಿಎಫ್ಸಿ ಆಟಗಾರರ ಉತ್ಸಾಹ ಇಮ್ಮಡಿಗೊಳಿಸಿದೆ. ಮೊದಲ ಪಂದ್ಯದಲ್ಲಿ ಗೆದ್ದು, ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಸಕಾರಾತ್ಮಕವಾಗಿ ಆರಂಭಿಸುವ ವಿಶ್ವಾಸದಲ್ಲಿದೆ.</p>.<p>ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಆಡುವ ಅವಕಾಶ ಲಭಿಸಿರುವುದಕ್ಕೆ ಬಿಎಫ್ಸಿ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತು ಕೋಚ್ ಸೈಮನ್ ಗ್ರೇಸನ್ ಅವರು ಸಂತಸ ವ್ಯಕ್ತಪಡಿಸಿದ್ಧಾರೆ.</p>.<p>‘ಕಿಕ್ಕಿರಿದು ತುಂಬುವ ಪ್ರೇಕ್ಷಕರ ಬೆಂಬಲದೊಂದಿಗೆ ಇಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇವೆ. ಕೋವಿಡ್ಗೆ ಮುಂಚೆ ಇಲ್ಲಿ ಪಂದ್ಯ ನಡೆಯುತ್ತಿದ್ದಾಗ ಅನುಭವಿಸಿದ್ದ ಪ್ರತಿಯೊಂದು ಸುಂದರ ಕ್ಷಣಗಳೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ’ ಎಂದು ಚೆಟ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಕಳೆದ ಎರಡು ಋತುಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಬಿಎಫ್ಸಿ, ಈ ಬಾರಿ ಹೊಸ ಆಟಗಾರರನ್ನು ಸೇರಿಸಿಕೊಂಡು ಶಕ್ತಿಯನ್ನು ವೃದ್ದಿಸಿಕೊಂಡಿದೆ. ರಾಯ್ ಕೃಷ್ಣ, ಪ್ರಬೀರ್ ದಾಸ್ ಮತ್ತು ಜಾವಿ ಹೆರ್ನಾಂಡೆಸ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಸಂದೇಶ್ ಜಿಂಗಾನ್, ಅಲೆಕ್ಸಾಂಡರ್ ಜವನೊವಿಚ್ ಮತ್ತು ಹೀರಾ ಮೊಂಡಲ್ ಅವರು ರಕ್ಷಣಾ ವಿಭಾಗಕ್ಕೆ ಬಲ ತುಂಬಲಿದ್ದಾರೆ.</p>.<p>‘ಅಂತಿಮ ಇಲೆವೆನ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ಚೆಟ್ರಿ ನಗು ಬೀರಿದರು. ‘ಯಾರಿಗೆಲ್ಲಾ ಆಡುವ ಅವಕಾಶ ಲಭಿಸುತ್ತದೆ ಎಂಬುದು ಖಚಿತವಿಲ್ಲ. ತಂಡದಲ್ಲಿ ಅಷ್ಟೊಂದು ಪೈಪೋಟಿಯಿದೆ’ ಎಂದು ಹೇಳಿದರು.</p>.<p>ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ಕಳೆದ ಋತುವಿಗೆ ಹೋಲಿಸಿದರೆ, ತಂಡದಲ್ಲಿ ಬಾರಿ ಬದಲಾವಣೆಗಳನ್ನು ಮಾಡಿಕೊಂಡಿದೆ. ‘ಇದು ಕಠಿಣ ಪಂದ್ಯ ಎಂಬುದರ ಅರಿವಿದೆ. ಬಿಎಫ್ಸಿ ತಂಡ ಸಮತೋಲನದಿಂದ ಕೂಡಿದೆ. ಆದರೆ ನಾವು ತಕ್ಕ ಸಿದ್ಧತೆಯೊಂದಿಗೆ ಬಂದಿದ್ದೇವೆ’ ಎಂದು ತಂಡದ ಕೋಚ್ ಮಾರ್ಕೊ ಬಲ್ಬುಲ್ ತಿಳಿಸಿದರು.</p>.<p><strong>ಪಂದ್ಯ ಆರಂಭ: ಸಂಜೆ 7.30</strong></p>.<p><strong>ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>