ಅಬುಧಾಬಿ: ಎಎಫ್ಸಿ ಏಷ್ಯಾಕಪ್ನಲ್ಲಿ ಭಾಗವಹಿಸಲಿರುವ ಭಾರತ ತಂಡದವರು ಗುರುವಾರ ಅಬುಧಾಬಿ ತಲುಪಿದ್ದಾರೆ.
ಭಾರತ ತಂಡ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿ ಆಡಲಿದೆ. ಜನವರಿ 6ರಂದು ನಡೆಯುವ ತನ್ನ ಮೊದಲ ಹೋರಾಟದಲ್ಲಿ ಥಾಯ್ಲೆಂಡ್ ಎದುರು ಸೆಣಸಲಿದೆ. ನಂತರ ಆತಿಥೇಯ ಯುಎಇ (ಜ.10) ಮತ್ತು ಬಹ್ರೇನ್ (ಜ.14) ತಂಡಗಳ ವಿರುದ್ಧ ಆಡಲಿದೆ.
ಟೂರ್ನಿಗೂ ಮುನ್ನ ಭಾರತ ತಂಡದವರು ಒಮನ್ ಎದುರು ಸೌಹಾರ್ದ ಪಂದ್ಯ ಆಡಲಿದ್ದಾರೆ. ಈ ಹಣಾಹಣಿ ಡಿಸೆಂಬರ್ 27ರಂದು ನಿಗದಿಯಾಗಿದೆ.
ತಂಡ ಇಂತಿದೆ: ಗೋಲ್ಕೀಪರ್ಗಳು: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಅರಿಂದಮ್ ಭಟ್ಟಾಚಾರ್ಯ ಮತ್ತು ವಿಶಾಲ್ ಕೇತ್.
ಡಿಫೆಂಡರ್ಗಳು: ಪ್ರೀತಮ್ ಕೋಟಾಲ್, ಲಾಲ್ರುಥಾರ, ಸಂದೇಶ್ ಜಿಂಗಾನ್, ಅನಾಸ್ ಎಡತೋಡಿಕಾ, ಸಲಾಂ ರಂಜನ್ ಸಿಂಗ್, ಸಾರ್ಥಕ್ ಗೊಲುಯಿ, ಸುಭಾಶಿಶ್ ಬೋಸ್ ಮತ್ತು ನಾರಾಯಣ ದಾಸ್.