<p><strong>ನವದೆಹಲಿ:</strong> ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಭಾರತ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಇಂದುಮತಿ ಕದಿರೆಸಾನ್ ಅವರೂಕೈಜೋಡಿಸಿದ್ದಾರೆ. ಲಾಕ್ಡೌನ್ ಕಾರಣ ಸಹ ಆಟಗಾರ್ತಿಯರು ಮನೆಯಲ್ಲೇ ಬಂದಿಯಾಗಿದ್ದರೆ, ಇಂದುಮತಿ ಪೊಲೀಸ್ ಸಮವಸ್ತ್ರಧರಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.</p>.<p>ಚೆನ್ನೈನಲ್ಲಿ, ತಮಿಳುನಾಡು ಪೊಲೀಸ್ ಇಲಾಖೆಯ ಸಾಂಪ್ರದಾಯಿಕ ಖಾಕಿ, ಸರ್ಜಿಕಲ್ ಮಾಸ್ಕ್, ಕೈಗವಸು ಧರಿಸಿದ್ದ ಅವರನ್ನು ಜನರು ಗುರುತಿಸಿದ್ದಾರೆ.</p>.<p>‘ಇಡೀ ದೇಶವು ಈಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ’ ಎಂದು ಇಂದುಮತಿ ಹೇಳಿದ್ದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ವೆಬ್ಸೈಟ್ ಉಲ್ಲೇಖಿಸಿದೆ.</p>.<p>25 ವರ್ಷದ ಮಿಡ್ಫೀಲ್ಡರ್ ಇಂದುಮತಿ ಅವರು ಭಾರತ ತಂಡದಲ್ಲಿ ಶಿಸ್ತಿಗೆ ಹೆಸರಾದವರು.</p>.<p>‘ಇದು ರಾಷ್ಟ್ರದ ಒಳಿತಿಗಾಗಿ ಕರೆ. ಕೋವಿಡ್ ಎದುರು ದೇಶ ನಡೆಸುತ್ತಿರುವ ಹೋರಾಟದಲ್ಲಿ ಪ್ರತಿದಿನ ಪಾಲ್ಗೊಳ್ಳಬೇಕು’ ಎಂದು ಇಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಭಾರತ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಇಂದುಮತಿ ಕದಿರೆಸಾನ್ ಅವರೂಕೈಜೋಡಿಸಿದ್ದಾರೆ. ಲಾಕ್ಡೌನ್ ಕಾರಣ ಸಹ ಆಟಗಾರ್ತಿಯರು ಮನೆಯಲ್ಲೇ ಬಂದಿಯಾಗಿದ್ದರೆ, ಇಂದುಮತಿ ಪೊಲೀಸ್ ಸಮವಸ್ತ್ರಧರಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.</p>.<p>ಚೆನ್ನೈನಲ್ಲಿ, ತಮಿಳುನಾಡು ಪೊಲೀಸ್ ಇಲಾಖೆಯ ಸಾಂಪ್ರದಾಯಿಕ ಖಾಕಿ, ಸರ್ಜಿಕಲ್ ಮಾಸ್ಕ್, ಕೈಗವಸು ಧರಿಸಿದ್ದ ಅವರನ್ನು ಜನರು ಗುರುತಿಸಿದ್ದಾರೆ.</p>.<p>‘ಇಡೀ ದೇಶವು ಈಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ’ ಎಂದು ಇಂದುಮತಿ ಹೇಳಿದ್ದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ವೆಬ್ಸೈಟ್ ಉಲ್ಲೇಖಿಸಿದೆ.</p>.<p>25 ವರ್ಷದ ಮಿಡ್ಫೀಲ್ಡರ್ ಇಂದುಮತಿ ಅವರು ಭಾರತ ತಂಡದಲ್ಲಿ ಶಿಸ್ತಿಗೆ ಹೆಸರಾದವರು.</p>.<p>‘ಇದು ರಾಷ್ಟ್ರದ ಒಳಿತಿಗಾಗಿ ಕರೆ. ಕೋವಿಡ್ ಎದುರು ದೇಶ ನಡೆಸುತ್ತಿರುವ ಹೋರಾಟದಲ್ಲಿ ಪ್ರತಿದಿನ ಪಾಲ್ಗೊಳ್ಳಬೇಕು’ ಎಂದು ಇಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>