<p><strong>ಲಂಡನ್:</strong> ‘ಕೊರೊನಾ ವೈರಸ್ ಭೀತಿ ಹರಡುತ್ತಿದ್ದರೂ ಬ್ರಿಟನ್ ಸರ್ಕಾರ ಮತ್ತು ಅಲ್ಲಿನ ಫುಟ್ಬಾಲ್ ಸಂಸ್ಥೆಯ ಅಧಿಕಾರಿಗಳು ಆಟಗಾರರ ಬಗ್ಗೆ ಕಾಳಜಿ ವಹಿಸಲಿಲ್ಲ’ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ವೇನ್ ರೂನಿ ದೂರಿದ್ದಾರೆ.</p>.<p>ಸೋಂಕು ಹರಡದಂತಿರಲು ಯುರೋಪ್ನ ಎಲ್ಲ ಕ್ರೀಡಾಕೂಟಗಳನ್ನು ತಕ್ಷಣ ಮುಂದೂಡಿದರೆ, ಪ್ರೀಮಿಯರ್ ಲೀಗ್ ಮತ್ತು ಇತರ ಫುಟ್ಬಾಲ್ ಲೀಗ್ಗಳನ್ನು ಮುಂದೂಡಲು ಮೀನ–ಮೇಷ ಎಣಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.</p>.<p>ಆರ್ಸೆನಲ್ ತಂಡದ ವ್ಯವಸ್ಥಾಪಕ ಮೈಕೆಲ್ ಆರ್ಟೆಟಾ ಮತ್ತು ಚೆಲ್ಸಿ ಆಟಗಾರ ಕಲುಮ್ ಹಡ್ಸನ್ ಒಡೊಯಿ ಅವರಿಗೆ ಸೋಂಕು ಇದೆ ಎಂದು ಶುಕ್ರವಾರ ಖಚಿತವಾಗಿತ್ತು. ಇದರ ನಂತರವಷ್ಟೇ ಏಪ್ರಿಲ್ 3ರ ವರೆಗೆ ಟೂರ್ನಿಗಳನ್ನು ಮುಂದೂಡಲು ಬ್ರಿಟನ್ ಫುಟ್ಬಾಲ್ ಆಡಳಿತ ನಿರ್ಧರಿಸಿತ್ತು.</p>.<p>ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಗಿರುವ ರೂನಿ ಈಗ ಡರ್ಬಿ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ‘ಕೊರೊನಾದ ಕುರಿತು ಆಡಳಿತ ಎಚ್ಚರಿಕೆಯಿಂದ ಇರಬೇಕಾಗಿತ್ತು. ನನ್ನ ಕುಟುಂಬದವರಿಗೇನಾದರೂ ತೊಂದರೆ ಆದರೆ ಅಧಿಕಾರಿಗಳನ್ನು ಕ್ಷಮಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ‘ಕೊರೊನಾ ವೈರಸ್ ಭೀತಿ ಹರಡುತ್ತಿದ್ದರೂ ಬ್ರಿಟನ್ ಸರ್ಕಾರ ಮತ್ತು ಅಲ್ಲಿನ ಫುಟ್ಬಾಲ್ ಸಂಸ್ಥೆಯ ಅಧಿಕಾರಿಗಳು ಆಟಗಾರರ ಬಗ್ಗೆ ಕಾಳಜಿ ವಹಿಸಲಿಲ್ಲ’ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ವೇನ್ ರೂನಿ ದೂರಿದ್ದಾರೆ.</p>.<p>ಸೋಂಕು ಹರಡದಂತಿರಲು ಯುರೋಪ್ನ ಎಲ್ಲ ಕ್ರೀಡಾಕೂಟಗಳನ್ನು ತಕ್ಷಣ ಮುಂದೂಡಿದರೆ, ಪ್ರೀಮಿಯರ್ ಲೀಗ್ ಮತ್ತು ಇತರ ಫುಟ್ಬಾಲ್ ಲೀಗ್ಗಳನ್ನು ಮುಂದೂಡಲು ಮೀನ–ಮೇಷ ಎಣಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.</p>.<p>ಆರ್ಸೆನಲ್ ತಂಡದ ವ್ಯವಸ್ಥಾಪಕ ಮೈಕೆಲ್ ಆರ್ಟೆಟಾ ಮತ್ತು ಚೆಲ್ಸಿ ಆಟಗಾರ ಕಲುಮ್ ಹಡ್ಸನ್ ಒಡೊಯಿ ಅವರಿಗೆ ಸೋಂಕು ಇದೆ ಎಂದು ಶುಕ್ರವಾರ ಖಚಿತವಾಗಿತ್ತು. ಇದರ ನಂತರವಷ್ಟೇ ಏಪ್ರಿಲ್ 3ರ ವರೆಗೆ ಟೂರ್ನಿಗಳನ್ನು ಮುಂದೂಡಲು ಬ್ರಿಟನ್ ಫುಟ್ಬಾಲ್ ಆಡಳಿತ ನಿರ್ಧರಿಸಿತ್ತು.</p>.<p>ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಗಿರುವ ರೂನಿ ಈಗ ಡರ್ಬಿ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ‘ಕೊರೊನಾದ ಕುರಿತು ಆಡಳಿತ ಎಚ್ಚರಿಕೆಯಿಂದ ಇರಬೇಕಾಗಿತ್ತು. ನನ್ನ ಕುಟುಂಬದವರಿಗೇನಾದರೂ ತೊಂದರೆ ಆದರೆ ಅಧಿಕಾರಿಗಳನ್ನು ಕ್ಷಮಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>