ಶನಿವಾರ ನಡೆದ ಪಂದ್ಯದಲ್ಲಿ ಅರಣ್ಯ ಇಲಾಖೆ 7–2ರಿಂದ ಎಚ್ಎಂಟಿ ತಂಡವನ್ನು ಪರಾಭವಗೊಳಿಸಿತು. ದರ್ಶನ್ 16, 29, 42 ಮತ್ತು 52ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ವಿಜೇತ ತಂಡಕ್ಕಾಗಿ ಮಿಥುನ್ ಬಿಜವಾಡ (12ನೇ ನಿ.), ನಾಗರಾಜ (46ನೇ ನಿ.), ನವೀನ್ ಕೆ.ಎ. (54ನೇ ನಿ.) ಗೋಲು ದಾಖಲಿಸಿದರು. ಎಚ್ಎಂಟಿ ಪರ ಕಾರ್ತಿಕ್ (14ನೇ ನಿ.) ಮತ್ತು ಮೊಸಿನ್ (48ನೇ ನಿ.) ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಯಂಗ್ಸ್ಟಾರ್ ಹಾಕಿ ಕ್ಲಬ್, ರಾಯಚೂರು 4–2ರಿಂದ ಗುರು ಕ್ಲಬ್ ತಂಡಕ್ಕೆ ಸೋಲುಣಿಸಿತು.