<p><strong>ಬೆಂಗಳೂರು</strong>: ಅಭಿನವ್ ಕೆ.ಮೂರ್ತಿ ಅವರು ತೀವ್ರ ಹೋರಾಟದ ಪಂದ್ಯದಲ್ಲಿ ವಿಭಾಸ್ ವಿ.ಜಿ ಅವರನ್ನು ಸೋಲಿಸಿ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ವೇದಾಲಕ್ಷ್ಮಿ ಡಿ.ಕೆ. ಅವರ ಪಾಲಾಯಿತು.</p>.<p>19 ವರ್ಷದೊಳಗಿನವ ಸಿಂಗಲ್ಸ್ನಲ್ಲಿ ಬುಧವಾರ ಚಾಂಪಿಯನ್ ಆಗಿದ್ದ ಅಭಿನವ್, ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಭಾಸ್ ಅವರನ್ನು 9–11, 11–7, 9–11, 9–11, 11–9, 11–7, 13–11 ರಿಂದ ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಪಂದ್ಯಗಳಲ್ಲಿ ವಿಭಾಸ್ 11–7, 10–12, 6–11, 11–7, 7–11, 11–7, 13–11 ರಿಂದ ಆಕಾಶ್ ಕೆ.ಜೆ. ಅವರನ್ನು ಸೋಲಿಸಿದರೆ, ಅಭಿನವ್ 11–5, 11–5, 11–9, 11–7 ರಿಂದ ಕೆ.ಕಲೈವಣ್ಣನ್ ಅವರನ್ನು ಹಿಮ್ಮೆಟ್ಟಿಸಿದರು.</p>.<p>ಮಹಿಳೆಯ ಸಿಂಗಲ್ಸ್ ಫೈನಲ್ನಲ್ಲಿ ವೇದಾಲಕ್ಷ್ಮಿ 9–11, 14–12, 12–10, 11–5, 11–9 ರಿಂದ ಖುಷಿ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಲಕ್ಷ್ಮಿ 11–7, 7–11, 11–9, 3–11, 11–4, 11–5 ರಿಂದ ಹಿಮಾನ್ಶಿ ಚೌಧರಿ ವಿರುದ್ಧ; ಖುಷಿ 8–11, 10–12, 6–11, 11–9, 12–10, 11–9, 11–8 ರಿಂದ ನೀತಿ ಅಗರವಾಲ್ ವಿರುದ್ಧ ಜಯಗಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಭಿನವ್ ಕೆ.ಮೂರ್ತಿ ಅವರು ತೀವ್ರ ಹೋರಾಟದ ಪಂದ್ಯದಲ್ಲಿ ವಿಭಾಸ್ ವಿ.ಜಿ ಅವರನ್ನು ಸೋಲಿಸಿ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ವೇದಾಲಕ್ಷ್ಮಿ ಡಿ.ಕೆ. ಅವರ ಪಾಲಾಯಿತು.</p>.<p>19 ವರ್ಷದೊಳಗಿನವ ಸಿಂಗಲ್ಸ್ನಲ್ಲಿ ಬುಧವಾರ ಚಾಂಪಿಯನ್ ಆಗಿದ್ದ ಅಭಿನವ್, ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಭಾಸ್ ಅವರನ್ನು 9–11, 11–7, 9–11, 9–11, 11–9, 11–7, 13–11 ರಿಂದ ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಪಂದ್ಯಗಳಲ್ಲಿ ವಿಭಾಸ್ 11–7, 10–12, 6–11, 11–7, 7–11, 11–7, 13–11 ರಿಂದ ಆಕಾಶ್ ಕೆ.ಜೆ. ಅವರನ್ನು ಸೋಲಿಸಿದರೆ, ಅಭಿನವ್ 11–5, 11–5, 11–9, 11–7 ರಿಂದ ಕೆ.ಕಲೈವಣ್ಣನ್ ಅವರನ್ನು ಹಿಮ್ಮೆಟ್ಟಿಸಿದರು.</p>.<p>ಮಹಿಳೆಯ ಸಿಂಗಲ್ಸ್ ಫೈನಲ್ನಲ್ಲಿ ವೇದಾಲಕ್ಷ್ಮಿ 9–11, 14–12, 12–10, 11–5, 11–9 ರಿಂದ ಖುಷಿ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಲಕ್ಷ್ಮಿ 11–7, 7–11, 11–9, 3–11, 11–4, 11–5 ರಿಂದ ಹಿಮಾನ್ಶಿ ಚೌಧರಿ ವಿರುದ್ಧ; ಖುಷಿ 8–11, 10–12, 6–11, 11–9, 12–10, 11–9, 11–8 ರಿಂದ ನೀತಿ ಅಗರವಾಲ್ ವಿರುದ್ಧ ಜಯಗಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>