<p><strong>ಕರಾಚಿ</strong> : ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಭಾರತವು ಮಧ್ಯ ಏಷ್ಯನ್ ವಾಲಿಬಾಲ್ ಟೂರ್ನಿಯಿಂದ ಭಾರತ ಹಿಂದೆಸರಿದಿತ್ತು. ಪಾಕಿಸ್ತಾನ ಆತಿಥ್ಯದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಈಗ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನ ಫೆಡರೇಷನ್ನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.<p>ಸೆಂಟ್ರಲ್ ಏಷ್ಯಾ ವಾಲಿಬಾಲ್ ಸಂಸ್ಥೆ (ಸಿಎವಿಎ) ಈ ನಿರ್ಧಾರಕ್ಕೆ ಬಂದಿದೆ. ‘ಭಾರತ ಹಿಂದೆ ಸರಿದಿದ್ದರೂ, ಟೂರ್ನಿಯನ್ನು ಸ್ಥಳಾಂತರಿಸುತ್ತಿರುವುದು ನಿರಾಸೆ ಮೂಡಿಸಿದೆ. ಆದರೆ ನಾವು ಸಿಎವಿಎ ಸರ್ವಸದಸ್ಯರ ಸಮಿತಿ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಪಾಕಿಸ್ತಾನ, ಇರಾನ್, ತುರ್ಕಮೆನಿಸ್ತಾನ, ಕಿರ್ಗಿಸ್ಥಾನ, ತಾಜಿಕಿಸ್ತಾನ, ಉಜ್ಬೇಕಿಸ್ತಾನ ತಂಡಗಳು ಕಣದಲ್ಲಿವೆ. ಟೂರ್ನಿಯ ದಿನಾಂಕ ಬದಲಾಗಿಲ್ಲ. ಮೇ 28ರಿಂದ ಟೂರ್ನಿ ನಿಗದಿಯಾಗಿದೆ.</p>.<p>ಟೂರ್ನಿಯಿಂದ ಭಾರತ ಹಿಂದೆಸರಿದಿದೆ ಎಂದು ಪಾಕಿಸ್ತಾನ ವಾಲಿಬಾಲ್ ಫೆಡರೇಷನ್ ಅಧಿಕಾರಿ ಅಬ್ದುಲ್ ಅಹದ್ ಏ. 27ರಂದು ಪ್ರಕಟಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ</strong> : ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಭಾರತವು ಮಧ್ಯ ಏಷ್ಯನ್ ವಾಲಿಬಾಲ್ ಟೂರ್ನಿಯಿಂದ ಭಾರತ ಹಿಂದೆಸರಿದಿತ್ತು. ಪಾಕಿಸ್ತಾನ ಆತಿಥ್ಯದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಈಗ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನ ಫೆಡರೇಷನ್ನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.<p>ಸೆಂಟ್ರಲ್ ಏಷ್ಯಾ ವಾಲಿಬಾಲ್ ಸಂಸ್ಥೆ (ಸಿಎವಿಎ) ಈ ನಿರ್ಧಾರಕ್ಕೆ ಬಂದಿದೆ. ‘ಭಾರತ ಹಿಂದೆ ಸರಿದಿದ್ದರೂ, ಟೂರ್ನಿಯನ್ನು ಸ್ಥಳಾಂತರಿಸುತ್ತಿರುವುದು ನಿರಾಸೆ ಮೂಡಿಸಿದೆ. ಆದರೆ ನಾವು ಸಿಎವಿಎ ಸರ್ವಸದಸ್ಯರ ಸಮಿತಿ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಪಾಕಿಸ್ತಾನ, ಇರಾನ್, ತುರ್ಕಮೆನಿಸ್ತಾನ, ಕಿರ್ಗಿಸ್ಥಾನ, ತಾಜಿಕಿಸ್ತಾನ, ಉಜ್ಬೇಕಿಸ್ತಾನ ತಂಡಗಳು ಕಣದಲ್ಲಿವೆ. ಟೂರ್ನಿಯ ದಿನಾಂಕ ಬದಲಾಗಿಲ್ಲ. ಮೇ 28ರಿಂದ ಟೂರ್ನಿ ನಿಗದಿಯಾಗಿದೆ.</p>.<p>ಟೂರ್ನಿಯಿಂದ ಭಾರತ ಹಿಂದೆಸರಿದಿದೆ ಎಂದು ಪಾಕಿಸ್ತಾನ ವಾಲಿಬಾಲ್ ಫೆಡರೇಷನ್ ಅಧಿಕಾರಿ ಅಬ್ದುಲ್ ಅಹದ್ ಏ. 27ರಂದು ಪ್ರಕಟಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>