<p><strong>ಮೈಸೂರು</strong>: ಕೇರಳದ ದೇವನಾರಾಯಣನ್ ಕಲ್ಲಿಯತ್ ಇದುವರೆಗೆ ಆಡಿರುವ ಎಂಟೂ ಸುತ್ತುಗಳಲ್ಲಿ ಗೆದ್ದು, 37ನೇ ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾನೆ. ಇನ್ನೊಂದು ಸುತ್ತು ಉಳಿದಿರುವಂತೆ, ಉಳಿದವರಿಗಿಂತ ಒಂದು ಪಾಯಿಂಟ್ ಮುಂದಿರುವ ಐದನೇ ಶ್ರೇಯಾಂಕದ ಈ ಆಟಗಾರ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.</p>.<p>ವಿಜಯನಗರ ನಾಲ್ಕನೇ ಹಂತದ ಸಂಭ್ರಮ ಕನ್ವೆನ್ಶನ್ ಹಾಲ್ನಲ್ಲಿ ನಡೆಯುತ್ತಿರುವ ಟೂರ್ನಿಯ ಏಳನೇ ಸುತ್ತಿನಲ್ಲಿ ದೇವನಾರಾಯಣನ್ (8 ಪಾಯಿಂಟ್ಸ್), ಪಶ್ಚಿಮ ಬಂಗಾಳದ ಆರಾಧ್ಯೊ ಗುಯಿನ್ (6.5) ವಿರುದ್ಧ ಜಯಗಳಿಸಿದ.</p>.<p>ಮೂವರು ಆಟಗಾರರು– ಕವಿನ್ ವೆಳವನ್ (ತಮಿಳುನಾಡು), ಇನ್ಬಾ ದಿನೇಶಬಾಬು (ತಮಿಳುನಾಡು) ಮತ್ತು ಪ್ರಯಂಕ್ ಗಾಂವಕರ್ (ಗೋವಾ)– ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.</p>.<p>ಅಗ್ರ ಶ್ರೇಯಾಂಕದ ಅಯಾನ್ಶ್ ಶಾ (ಉತ್ತರ ಪ್ರದೇಶ), ಆರಾಧ್ಯೊ, ಆನಂದ್ ತಕ್ಷಂತ್ (ತಮಿಳುನಾಡು) ಸೇರಿದಂತೆ ಆರು ಆಟಗಾರರು ತಲಾ 6.5 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನದಲ್ಲಿದ್ದಾರೆ. ಆಯಾನ್ಶ್ ಏಳನೇ ಸುತ್ತಿನಲ್ಲಿ ಪ್ರಯಂಕ್ ಗಾಂವ್ಕರ್ ಎದುರು ಸೋತಿದ್ದು ಹಿನ್ನಡೆ ಉಂಟುಮಾಡಿತು.</p>.<p>ಬಾಲಕಿಯರ ವಿಭಾಗದಲ್ಲಿ ಐದು ಮಂದಿ ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಶ್ರೇಯಾನ್ಶಿ ಜೈನ್, ಪೌಶಿತಾ ಪಾಲಿವಾಲ್ (ಇಬ್ಬರೂ ರಾಜಸ್ಥಾನ), ಆರಣ್ಯಾ (ತಮಿಳುನಾಡು), ಅರ್ಪಿತಾಂಗ್ಶಿ ಭಟ್ಟಾಚಾರ್ಯ (ತಮಿಳುನಾಡು), ಅನ್ವಿ ದೀಪಕ್ ಹಿಂಗೆ (ಮಹಾರಾಷ್ಟ್ರ) ಇವರು ಆ ಐವರು. 6.5 ಪಾಯಿಂಟ್ಸ್ ಗಳಿಸಿರುವ ಸಾಯಿಆಸ್ತಾ ಸಿಂಗ್ (ಪಶ್ಚಿಮ ಬಂಗಾಳ) ಎರಡನೇ ಸ್ಥಾನದಲ್ಲಿದ್ದಾಳೆ. 13 ಆಟಗಾರ್ತಿಯರು ತಲಾ 6 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.</p>.<p>ಎರಡನೇ ಶ್ರೇಯಾಂಕದ ಅರ್ಪಿತಾಂಗ್ಶಿ ಏಳನೇ ಸುತ್ತಿನಲ್ಲಿ ಶ್ರೇಯಾನ್ಶಿ ವಿರುದ್ಧ, ಆರಣ್ಯಾ, ತೆಲಂಗಾಣದ ರೌದಾ ಸೈಯ್ಯದ್ (6) ವಿರುದ್ಧ ಜಯಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕೇರಳದ ದೇವನಾರಾಯಣನ್ ಕಲ್ಲಿಯತ್ ಇದುವರೆಗೆ ಆಡಿರುವ ಎಂಟೂ ಸುತ್ತುಗಳಲ್ಲಿ ಗೆದ್ದು, 37ನೇ ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾನೆ. ಇನ್ನೊಂದು ಸುತ್ತು ಉಳಿದಿರುವಂತೆ, ಉಳಿದವರಿಗಿಂತ ಒಂದು ಪಾಯಿಂಟ್ ಮುಂದಿರುವ ಐದನೇ ಶ್ರೇಯಾಂಕದ ಈ ಆಟಗಾರ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.</p>.<p>ವಿಜಯನಗರ ನಾಲ್ಕನೇ ಹಂತದ ಸಂಭ್ರಮ ಕನ್ವೆನ್ಶನ್ ಹಾಲ್ನಲ್ಲಿ ನಡೆಯುತ್ತಿರುವ ಟೂರ್ನಿಯ ಏಳನೇ ಸುತ್ತಿನಲ್ಲಿ ದೇವನಾರಾಯಣನ್ (8 ಪಾಯಿಂಟ್ಸ್), ಪಶ್ಚಿಮ ಬಂಗಾಳದ ಆರಾಧ್ಯೊ ಗುಯಿನ್ (6.5) ವಿರುದ್ಧ ಜಯಗಳಿಸಿದ.</p>.<p>ಮೂವರು ಆಟಗಾರರು– ಕವಿನ್ ವೆಳವನ್ (ತಮಿಳುನಾಡು), ಇನ್ಬಾ ದಿನೇಶಬಾಬು (ತಮಿಳುನಾಡು) ಮತ್ತು ಪ್ರಯಂಕ್ ಗಾಂವಕರ್ (ಗೋವಾ)– ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.</p>.<p>ಅಗ್ರ ಶ್ರೇಯಾಂಕದ ಅಯಾನ್ಶ್ ಶಾ (ಉತ್ತರ ಪ್ರದೇಶ), ಆರಾಧ್ಯೊ, ಆನಂದ್ ತಕ್ಷಂತ್ (ತಮಿಳುನಾಡು) ಸೇರಿದಂತೆ ಆರು ಆಟಗಾರರು ತಲಾ 6.5 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನದಲ್ಲಿದ್ದಾರೆ. ಆಯಾನ್ಶ್ ಏಳನೇ ಸುತ್ತಿನಲ್ಲಿ ಪ್ರಯಂಕ್ ಗಾಂವ್ಕರ್ ಎದುರು ಸೋತಿದ್ದು ಹಿನ್ನಡೆ ಉಂಟುಮಾಡಿತು.</p>.<p>ಬಾಲಕಿಯರ ವಿಭಾಗದಲ್ಲಿ ಐದು ಮಂದಿ ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಶ್ರೇಯಾನ್ಶಿ ಜೈನ್, ಪೌಶಿತಾ ಪಾಲಿವಾಲ್ (ಇಬ್ಬರೂ ರಾಜಸ್ಥಾನ), ಆರಣ್ಯಾ (ತಮಿಳುನಾಡು), ಅರ್ಪಿತಾಂಗ್ಶಿ ಭಟ್ಟಾಚಾರ್ಯ (ತಮಿಳುನಾಡು), ಅನ್ವಿ ದೀಪಕ್ ಹಿಂಗೆ (ಮಹಾರಾಷ್ಟ್ರ) ಇವರು ಆ ಐವರು. 6.5 ಪಾಯಿಂಟ್ಸ್ ಗಳಿಸಿರುವ ಸಾಯಿಆಸ್ತಾ ಸಿಂಗ್ (ಪಶ್ಚಿಮ ಬಂಗಾಳ) ಎರಡನೇ ಸ್ಥಾನದಲ್ಲಿದ್ದಾಳೆ. 13 ಆಟಗಾರ್ತಿಯರು ತಲಾ 6 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.</p>.<p>ಎರಡನೇ ಶ್ರೇಯಾಂಕದ ಅರ್ಪಿತಾಂಗ್ಶಿ ಏಳನೇ ಸುತ್ತಿನಲ್ಲಿ ಶ್ರೇಯಾನ್ಶಿ ವಿರುದ್ಧ, ಆರಣ್ಯಾ, ತೆಲಂಗಾಣದ ರೌದಾ ಸೈಯ್ಯದ್ (6) ವಿರುದ್ಧ ಜಯಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>