ಬೆಂಗಳೂರು: ಶುಕ್ರವಾರ ಶತಮಾ ನೋತ್ಸವ ಆಚರಿಸಿಕೊಂಡ ಬೆಂಗ ಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ) ಮತ್ತು ಕರ್ನಾಟಕ ಗಾಲ್ಫ್ ಸಂಸ್ಥೆಯ ಆಶ್ರಯದಲ್ಲಿ ಗಾಲ್ಫ್ ಡೇ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿಯುಸಿಸಿ ಅಧ್ಯಕ್ಷ ರಾಹುಲ್ ದ್ರಾವಿಡ್,ಜೂನಿಯರ್ ಗಾಲ್ಫ್ ಅಕಾಡೆಮಿ ಉದ್ಘಾಟಿಸಿದರು.
‘ಯಾವುದೇ ಕ್ರೀಡೆ ಇರಲಿ. ಶಿಸ್ತು ಮತ್ತು ಬದ್ಧತೆಯಿಂದ ಅಭ್ಯಾಸ ಮಾಡಿ ದರೆ ಉತ್ತಮ ಸಾಧನೆ ಮಾಡುವುದು ಸಾಧ್ಯ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಜಿಎ ಅಧ್ಯಕ್ಷ ಹರೀಶಕುಮಾರ್ ಶೆಟ್ಟಿ ಮತ್ತಿತರರು ಹಾಜರಿದ್ದರು.