ಮೊದಲಾರ್ಧದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಹಾಕಿ ಕರ್ನಾಟಕ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 36ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ವಿಭಾಗದವರು ಮಾಡಿದ ಎಡವಟ್ಟಿನ ಲಾಭ ಪಡೆದುಕೊಂಡ ಪೃಥ್ವಿರಾಜ್ ಚೆಂಡನ್ನು ಗುರಿ ಮುಟ್ಟಿಸಿದರು. ಆದರೆ 43ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್ ಗಳಿಸಿದ ಗೋಲು ಏರ್ ಇಂಡಿಯಾಗೆ ಸಮಬಲ ತಂದುಕೊಟ್ಟಿತು.