ಬೆಂಗಳೂರು: ಭಾರತ ಪುರುಷರ ಹಾಕಿ ತಂಡದ ರಾಷ್ಟ್ರೀಯ ಶಿಬಿರವು ಬೆಂಗಳೂರಿನಲ್ಲಿ ಜನವರಿ 5ರಿಂದ ನಡೆಯಲಿದೆ. ತಂಡದ ನಾಯಕ ಮನ್ಪ್ರೀತ್ ಸಿಂಗ್, ಗೋಲ್ಕೀಪರ್ ಪಿ.ಆರ್.ಶ್ರೀಜೇಶ್, ಕನ್ನಡಿಗ ಎಸ್.ವಿ.ಸುನಿಲ್ ಸೇರಿದಂತೆ 33 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಆವರಣದಲ್ಲಿ ಶಿಬಿರ ನಡೆಯಲಿದ್ದು, ತರಬೇತಿಗೂ ಮೊದಲು ಆಟಗಾರರು ಸಾಯ್ ಹಾಗೂ ಹಾಕಿ ಇಂಡಿಯಾದ ಮಾರ್ಗಸೂಚಿಗಳ ಅನ್ವಯ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ.
‘ಮೂರು ವಾರಗಳ ವಿರಾಮದ ಬಳಿ ಆಟಗಾರರು ಮಾನಸಿಕ ಹಾಗೂ ದೈಹಿಕವಾಗಿ ಹೊಸ ಉತ್ಸಾಹದೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳುವುದನ್ನು ನಿರೀಕ್ಷಿಸುತ್ತೇನೆ‘ ಎಂದು ಭಾರತ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
‘ಮಂಬರುವ ಟೂರ್ನಿಗಳಿಗೆ ಸೂಕ್ತ ರೀತಿಯಲ್ಲಿ ಸಜ್ಜುಗೊಳ್ಳಲು ಈ ಶಿಬಿರವನ್ನು ಬಳಸಿಕೊಳ್ಳಲಾಗುವುದು‘ ಎಂದು ರೀಡ್ ನುಡಿದರು.
ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಸಂಭಾವ್ಯ ಆಟಗಾರರು: ಗೋಲ್ಕೀಪರ್ಸ್: ಪಿ.ಆರ್.ಶ್ರೀಜೇಶ್, ಕೃಷ್ಣ ಬಹಾದ್ದೂರ್ ಪಾಠಕ್, ಸೂರಜ್ ಕರ್ಕೇರಾ.