ದಕ್ಷಿಣ ವಲಯ, ರಾಷ್ಟ್ರೀಯ ಜೂನಿಯರ್ ಮತ್ತು 23 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಆಯ್ಕೆ ಪ್ರಕ್ರಿಯೆಯೂ ಮಂಗಳೂರು ಕೂಟದಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯ ಅಭಿನ್ ದೇವಾಡಿಗ (100 ಮೀ), ಧ್ರುವ ಬಲ್ಲಾಳ್ (400 ಮೀ), ಕೀರ್ತನಾ ಎಸ್ (200 ಮೀ) ದಕ್ಷಿಣ ಕನ್ನಡ ಜಿಲ್ಲೆಯ ಮಹಾಂತೇಶ್ ಮತ್ತು ತೀರ್ಥೇಶ್ ಶೆಟ್ಟಿ (400 ಮೀ), 200 ಮೀಟರ್ಸ್ ಓಟದಲ್ಲಿ ಈ ಬಾರಿ ರಾಜ್ಯ ದಾಖಲೆ ಮುರಿದಿರುವ ಹಾವೇರಿಯ ಶಶಿಕಾಂತ್ ವಿ.ಎ ಸ್ಪರ್ಧಾ ಕಣದಲ್ಲಿ ಇದ್ದಾರೆ. ಮಹಿಳೆಯರ 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಂಗಳೂರಿನ ಪ್ರಿಯಾ ಮೋಹನ್, ಹೈಜಂಪ್ನಲ್ಲಿ ಬೆಂಗಳೂರಿನ ಪಾವನಾ ನಾಗರಾಜ್, ದಕ್ಷಿಣ ಕನ್ನಡದ ಸುಪ್ರೀತಾ, 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಂಗಳೂರಿನ ಉನ್ನತಿ ಅಯ್ಯಪ್ಪ ಸ್ಪರ್ಧಿಸುತ್ತಿದ್ದಾರೆ.