<p><strong>ಬೆಂಗಳೂರು:</strong> ತುಷಾರ್ ಸುವೀರ್ ಮತ್ತು ಶೈನಾ ಮಣಿಮುತ್ತು ಅವರು ಭಾನುವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಗಳ ಪ್ರಶಸ್ತಿ ಜಯಿಸಿದರು.</p>.<p>ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ಯಲ್ಲಿ ನಡೆದ ಟೂರ್ನಿಯಲ್ಲಿ ತುಷಾರ್ ಅವರು ಪುರುಷರ ಫೈನಲ್ನಲ್ಲಿ 22–20, 21–19ರಿಂದ ಐದನೇ ಶ್ರೇಯಾಂಕದ ನಿಕೋಲಸ್ ರಾಜ್ ವಿರುದ್ಧ ಗೆದ್ದರು. ಮೊದಲ ಗೇಮ್ನಲ್ಲಿ ಉಭಯ ಆಟಗಾರರು ಭಾರಿ ಪೈಪೋಟಿ ನಡೆಸಿದರು. ಅದರಿಂದಾಗಿ ಗೇಮ್ ಫಲಿತಾಂಶವು ಟೈಬ್ರೇಕರ್ನಲ್ಲಿ ಹೊರಹೊಮ್ಮಿತು. </p>.<p>ಬೆಂಗಳೂರು ಗ್ರಾಮಾಂತರ ವಿಭಾಗದ ಆಟಗಾರ ತುಷಾರ್ ಎರಡನೇ ಗೇಮ್ನಲ್ಲಿ ಚುರುಕಾಗಿ ಆಡಿದರು. 21–19ರಿಂದ ನಿಕೋಲಸ್ ಪೈಪೋಟಿಯನ್ನು ಮೀರಿ ನಿಂತರು. </p>.<p>ಮಹಿಳೆಯರ ವಿಭಾಗದ ಫೈನಲ್ ರೋಚಕವಾಗಿತ್ತು. ಶೈನಾ ಮಣಿಮುತ್ತು 15-21, 27-25, 21-15 ರಿಂದ ಅಶ್ವತಿ ವರ್ಗೀಸ್ ವಿರುದ್ಧ ಗೆದ್ದರು. </p>.<p>ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನಿ ಭಟ್–ಶಿಖಾ ಗೌತಮ್ 21–10, 21–8ರಿಂದ ಗ್ಲೋರಿಯಾ ಅಠಾವಳೆ ಮತ್ತು ಪ್ರೇರಣಾ ಎನ್ಎಸ್ ಜೋಡಿಯನ್ನು ಸೋಲಿಸಿದರು. </p>.<p>ಮಿಶ್ರ ಡಬಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಕಾಶ್ ರಾಜ್ ಎಸ್ ಮತ್ತು ಕರ್ಣಿಕಾ ಶ್ರೀ ಜೋಡಿಯು 18-21, 21-11, 21-16 ರಿಂದ ಕಿಶಾಲ್ ಗಣಪತಿ ಮತ್ತು ರಶ್ಮಿ ಗಣೇಶ್ ವಿರುದ್ಧ ಗೆದ್ದರು. </p>.<p>ಪುರುಷರ ಡಬಲ್ಸ್ನಲ್ಲಿ ಎಸ್. ಪವನ್–ಎಸ್ ಪುನೀತ್ 17-21, 22-20, 21-14ರಿಂದ ಅಮಿತ್ ರಾಜ್ ನಟರಾಜ್–ಹಾರ್ದಿಕ್ ದಿವ್ಯಾಂಶ್ ಜೋಡಿಯ ವಿರುದ್ಧ ಮೇಲುಗೈ ಸಾಧಿಸಿದರು. </p>.<p>ಜೂನಿಯರ್ ಬಾಲಕಿಯರ ಸಿಂಗಲ್ಸ್ನಲ್ಲಿ ಶೈನಾ ಮಣಿಮುತ್ತು 21-10, 21-15 ರಿಂದ ಹಿತೈಶ್ರೀ ಎಲ್ ರಾಜಯ್ಯ ವಿರುದ್ಧ ಗೆದ್ದರು. ಡಬಲ್ಸ್ನಲ್ಲಿ ಅಶ್ವತಿ ವರ್ಗೀಸ್–ಲಕ್ಷ್ಯ ರಾಜೇಶ್ 21–17, 21–8ರಿಂದ ಇಶಿಕಾ ಬರುವಾ ಕಶ್ಯಪ್–ತನಿಕಾ ಮೋಹನ್ ವಿರುದ್ಧ ಗೆದ್ದರು. </p>.<p>ಮಿಶ್ರ ಡಬಲ್ಸ್ನಲ್ಲಿ ಎಸ್. ನಿಶ್ಚಲ್–ಸುಹೈನಾ ರಾಯ್ 15-21, 21-18, 21-12 ರಿಂದ ಕ್ರಿಸ್ ಬ್ಯಾಪ್ಟಿಸ್ಟ್ ಮತ್ತು ಎ.ಎಸ್. ಮೌನಿತಾ ವಿರುದ್ಧ ಜಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತುಷಾರ್ ಸುವೀರ್ ಮತ್ತು ಶೈನಾ ಮಣಿಮುತ್ತು ಅವರು ಭಾನುವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಗಳ ಪ್ರಶಸ್ತಿ ಜಯಿಸಿದರು.</p>.<p>ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ಯಲ್ಲಿ ನಡೆದ ಟೂರ್ನಿಯಲ್ಲಿ ತುಷಾರ್ ಅವರು ಪುರುಷರ ಫೈನಲ್ನಲ್ಲಿ 22–20, 21–19ರಿಂದ ಐದನೇ ಶ್ರೇಯಾಂಕದ ನಿಕೋಲಸ್ ರಾಜ್ ವಿರುದ್ಧ ಗೆದ್ದರು. ಮೊದಲ ಗೇಮ್ನಲ್ಲಿ ಉಭಯ ಆಟಗಾರರು ಭಾರಿ ಪೈಪೋಟಿ ನಡೆಸಿದರು. ಅದರಿಂದಾಗಿ ಗೇಮ್ ಫಲಿತಾಂಶವು ಟೈಬ್ರೇಕರ್ನಲ್ಲಿ ಹೊರಹೊಮ್ಮಿತು. </p>.<p>ಬೆಂಗಳೂರು ಗ್ರಾಮಾಂತರ ವಿಭಾಗದ ಆಟಗಾರ ತುಷಾರ್ ಎರಡನೇ ಗೇಮ್ನಲ್ಲಿ ಚುರುಕಾಗಿ ಆಡಿದರು. 21–19ರಿಂದ ನಿಕೋಲಸ್ ಪೈಪೋಟಿಯನ್ನು ಮೀರಿ ನಿಂತರು. </p>.<p>ಮಹಿಳೆಯರ ವಿಭಾಗದ ಫೈನಲ್ ರೋಚಕವಾಗಿತ್ತು. ಶೈನಾ ಮಣಿಮುತ್ತು 15-21, 27-25, 21-15 ರಿಂದ ಅಶ್ವತಿ ವರ್ಗೀಸ್ ವಿರುದ್ಧ ಗೆದ್ದರು. </p>.<p>ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನಿ ಭಟ್–ಶಿಖಾ ಗೌತಮ್ 21–10, 21–8ರಿಂದ ಗ್ಲೋರಿಯಾ ಅಠಾವಳೆ ಮತ್ತು ಪ್ರೇರಣಾ ಎನ್ಎಸ್ ಜೋಡಿಯನ್ನು ಸೋಲಿಸಿದರು. </p>.<p>ಮಿಶ್ರ ಡಬಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಕಾಶ್ ರಾಜ್ ಎಸ್ ಮತ್ತು ಕರ್ಣಿಕಾ ಶ್ರೀ ಜೋಡಿಯು 18-21, 21-11, 21-16 ರಿಂದ ಕಿಶಾಲ್ ಗಣಪತಿ ಮತ್ತು ರಶ್ಮಿ ಗಣೇಶ್ ವಿರುದ್ಧ ಗೆದ್ದರು. </p>.<p>ಪುರುಷರ ಡಬಲ್ಸ್ನಲ್ಲಿ ಎಸ್. ಪವನ್–ಎಸ್ ಪುನೀತ್ 17-21, 22-20, 21-14ರಿಂದ ಅಮಿತ್ ರಾಜ್ ನಟರಾಜ್–ಹಾರ್ದಿಕ್ ದಿವ್ಯಾಂಶ್ ಜೋಡಿಯ ವಿರುದ್ಧ ಮೇಲುಗೈ ಸಾಧಿಸಿದರು. </p>.<p>ಜೂನಿಯರ್ ಬಾಲಕಿಯರ ಸಿಂಗಲ್ಸ್ನಲ್ಲಿ ಶೈನಾ ಮಣಿಮುತ್ತು 21-10, 21-15 ರಿಂದ ಹಿತೈಶ್ರೀ ಎಲ್ ರಾಜಯ್ಯ ವಿರುದ್ಧ ಗೆದ್ದರು. ಡಬಲ್ಸ್ನಲ್ಲಿ ಅಶ್ವತಿ ವರ್ಗೀಸ್–ಲಕ್ಷ್ಯ ರಾಜೇಶ್ 21–17, 21–8ರಿಂದ ಇಶಿಕಾ ಬರುವಾ ಕಶ್ಯಪ್–ತನಿಕಾ ಮೋಹನ್ ವಿರುದ್ಧ ಗೆದ್ದರು. </p>.<p>ಮಿಶ್ರ ಡಬಲ್ಸ್ನಲ್ಲಿ ಎಸ್. ನಿಶ್ಚಲ್–ಸುಹೈನಾ ರಾಯ್ 15-21, 21-18, 21-12 ರಿಂದ ಕ್ರಿಸ್ ಬ್ಯಾಪ್ಟಿಸ್ಟ್ ಮತ್ತು ಎ.ಎಸ್. ಮೌನಿತಾ ವಿರುದ್ಧ ಜಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>