ನವದೆಹಲಿ: ಉತ್ತರ ಭಾರತದ ಪ್ರತಿಕೂಲ ಹವಾಮಾನದಿಂದಾಗಿ ಹಲವು ಬಾರಿ ರದ್ದುಗೊಂಡಿದ್ದ ಅಮರನಾಥ ಯಾತ್ರೆ ಮರು ಆರಂಭಗೊಂಡಿದ್ದು, ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಮರನಾಥ ಯಾತ್ರೆ ಪೂರ್ಣಗೊಳಿಸಿದ್ದಾರೆ.
ತಮ್ಮ ತಾಯಿಯೊಂದಿಗೆ ಯಾತ್ರೆ ಕೈಗೊಂಡಿದ್ದ ಸೈನಾ, ಪ್ರತಿಕೂಲ ಪರಿಸ್ಥಿತಿಯಲ್ಲೂ ಯಾತ್ರೆ ಸಂಪನ್ನಗೊಂಡಿದ್ದಕ್ಕೆ ಮತ್ತು ಅದನ್ನು ಸಾಕಾರಗೊಳಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.