‘ದೇಶಿ ಸೊಬಗಿನ ಕಬಡ್ಡಿಯನ್ನು ಹೆಚ್ಚು ರೋಮಾಂಚಕವಾಗಿಸುವುದಕ್ಕಾಗಿ ಹೊಸ ಮಾದರಿಯನ್ನು ಜಾರಿಗೆ ತರಲಾಗಿದೆ. ‘ಟ್ರಿಪಲ್’ ಪಂದ್ಯಗಳು ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಲು ನೆರವಾಗಲಿದೆ. ಎರಡು ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡುವುದರಿಂದ ತಂಡಗಳಿಗೆ ರಣತಂತ್ರಗಳನ್ನು ಹೆಣೆಯುವುದು ಸುಲಭವಾಗಲಿದೆ’ ಎಂದು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಅಭಿಪ್ರಾಯಪಟ್ಟರು.