<p><strong>ಬೆಂಗಳೂರು:</strong> ಆದಿಲ್ ಮತ್ತು ದೀಕ್ಷಿತ್ ಅವರ ಆಟದ ಬಲದಿಂದ ದಕ್ಷಿಣ ಕನ್ನಡ ಜಿಲ್ಲಾ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 72–47ರಿಂದ ದಾವಣಗೆರೆ ಜಿಲ್ಲಾ ತಂಡವನ್ನು ಮಣಿಸಿತು.</p>.<p>ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಮಂಗಳವಾರ ನಡೆದ ಲೀಗ್ನ ಪಂದ್ಯದಲ್ಲಿ ವಿರಾಮದ ವೇಳೆ (32–33) ಒಂದು ಅಂಕಗಳಿಂದ ಹಿನ್ನಡೆಯಲ್ಲಿದ್ದ ದಕ್ಷಿಣ ಕನ್ನಡ ತಂಡವು ನಂತರದಲ್ಲಿ ಪಾರಮ್ಯ ಮೆರೆಯಿತು. ಆದಿಲ್ ಮತ್ತು ದೀಕ್ಷಿತ್ ತಲಾ 19 ಅಂಕ ಗಳಿಸಿದರು. ದಾವಣಗೆರೆ ತಂಡದ ಕೌಶಿಕ್ 18 ಅಂಕ ಕಲೆಹಾಕಿದರು. </p>.<p><strong>ಫಲಿತಾಂಶ: ಬಾಲಕರು:</strong> ಮಂಡ್ಯ ಜಿಲ್ಲೆ 61–52ರಿಂದ ಹಾಸನ ಜಿಲ್ಲೆ ವಿರುದ್ಧ; ಧಾರವಾಡ ಜಿಲ್ಲೆ ಬಿ 62–42ರಿಂದ ಮೈಸೂರು ಜಿಲ್ಲೆ ಬಿ ವಿರುದ್ಧ; ಮೈಸೂರು ಜಿಲ್ಲೆ ಎ 54–11ರಿಂದ ಬಳ್ಳಾರಿ ವಿರುದ್ಧ; ಚಿಕ್ಕಮಗಳೂರು ಜಿಲ್ಲೆ 54–15ರಿಂದ ಹಾಸನ ಜಿಲ್ಲೆ ವಿರುದ್ಧ; ಹೂಪ್ಸ್ 7 ಬಿಸಿ 75–24ರಿಂದ ಲಕ್ಷ್ಮಣ್ ಬಿ.ಸಿ. ವಿರುದ್ಧ; ರಾಮನಗರ ಜಿಲ್ಲೆ 48–12ರಿಂದ ಚಿಕ್ಕಬಳ್ಳಾಪುರ ಜಿಲ್ಲೆ ವಿರುದ್ಧ; ಧಾರವಾಡ ಜಿಲ್ಲೆ ಬಿ 79–53ರಿಂದ ಚಾಮರಾಜನಗರ ಜಿಲ್ಲೆ ವಿರುದ್ಧ; ದಕ್ಷಿಣ ಕನ್ನಡ ಜಿಲ್ಲೆ 72–47ರಿಂದ ದಾವಣಗೆರೆ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿತು.</p>.<p><strong>ಬಾಲಕಿಯರು:</strong> ದಾವಣಗೆರೆ ಜಿಲ್ಲೆ 56–28ರಿಂದ ಚಾಮರಾಜನಗರ ಜಿಲ್ಲೆ ಎದುರು; ವಿಜಯಪುರ ಜಿಲ್ಲೆ 47–26ರಿಂದ ಧಾರವಾಡ ಜಿಲ್ಲೆ ಎದುರು ಜಯ ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆದಿಲ್ ಮತ್ತು ದೀಕ್ಷಿತ್ ಅವರ ಆಟದ ಬಲದಿಂದ ದಕ್ಷಿಣ ಕನ್ನಡ ಜಿಲ್ಲಾ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 72–47ರಿಂದ ದಾವಣಗೆರೆ ಜಿಲ್ಲಾ ತಂಡವನ್ನು ಮಣಿಸಿತು.</p>.<p>ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಮಂಗಳವಾರ ನಡೆದ ಲೀಗ್ನ ಪಂದ್ಯದಲ್ಲಿ ವಿರಾಮದ ವೇಳೆ (32–33) ಒಂದು ಅಂಕಗಳಿಂದ ಹಿನ್ನಡೆಯಲ್ಲಿದ್ದ ದಕ್ಷಿಣ ಕನ್ನಡ ತಂಡವು ನಂತರದಲ್ಲಿ ಪಾರಮ್ಯ ಮೆರೆಯಿತು. ಆದಿಲ್ ಮತ್ತು ದೀಕ್ಷಿತ್ ತಲಾ 19 ಅಂಕ ಗಳಿಸಿದರು. ದಾವಣಗೆರೆ ತಂಡದ ಕೌಶಿಕ್ 18 ಅಂಕ ಕಲೆಹಾಕಿದರು. </p>.<p><strong>ಫಲಿತಾಂಶ: ಬಾಲಕರು:</strong> ಮಂಡ್ಯ ಜಿಲ್ಲೆ 61–52ರಿಂದ ಹಾಸನ ಜಿಲ್ಲೆ ವಿರುದ್ಧ; ಧಾರವಾಡ ಜಿಲ್ಲೆ ಬಿ 62–42ರಿಂದ ಮೈಸೂರು ಜಿಲ್ಲೆ ಬಿ ವಿರುದ್ಧ; ಮೈಸೂರು ಜಿಲ್ಲೆ ಎ 54–11ರಿಂದ ಬಳ್ಳಾರಿ ವಿರುದ್ಧ; ಚಿಕ್ಕಮಗಳೂರು ಜಿಲ್ಲೆ 54–15ರಿಂದ ಹಾಸನ ಜಿಲ್ಲೆ ವಿರುದ್ಧ; ಹೂಪ್ಸ್ 7 ಬಿಸಿ 75–24ರಿಂದ ಲಕ್ಷ್ಮಣ್ ಬಿ.ಸಿ. ವಿರುದ್ಧ; ರಾಮನಗರ ಜಿಲ್ಲೆ 48–12ರಿಂದ ಚಿಕ್ಕಬಳ್ಳಾಪುರ ಜಿಲ್ಲೆ ವಿರುದ್ಧ; ಧಾರವಾಡ ಜಿಲ್ಲೆ ಬಿ 79–53ರಿಂದ ಚಾಮರಾಜನಗರ ಜಿಲ್ಲೆ ವಿರುದ್ಧ; ದಕ್ಷಿಣ ಕನ್ನಡ ಜಿಲ್ಲೆ 72–47ರಿಂದ ದಾವಣಗೆರೆ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿತು.</p>.<p><strong>ಬಾಲಕಿಯರು:</strong> ದಾವಣಗೆರೆ ಜಿಲ್ಲೆ 56–28ರಿಂದ ಚಾಮರಾಜನಗರ ಜಿಲ್ಲೆ ಎದುರು; ವಿಜಯಪುರ ಜಿಲ್ಲೆ 47–26ರಿಂದ ಧಾರವಾಡ ಜಿಲ್ಲೆ ಎದುರು ಜಯ ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>