<p><strong>ವಿಜಯವಾಡ</strong>: ಅಗ್ರ ಶ್ರೇಯಾಂಕದ ಮಾನವ್ ಠಕ್ಕರ್ ಅವರು ಗಾಯಾಳಾದ ಎರಡನೇ ಶ್ರೇಯಾಂಕದ ಜಿ.ಸತ್ಯನ್ ಅವರನ್ನು 4–2 ರಿಂದ ಸೋಟಲಿಸಿ ಯುಟಿಟಿ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ಕಿರೀಟ ಧರಿಸಿದರು.</p><p>ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಶ್ರೀಜಾ ಆಕುಲಾ ಹಿನ್ನಡೆಯಿಂದ ಚೇತರಿಸಿ ಕರ್ನಾಟಕದ ಅರ್ಚನಾ ಕಾಮತ್ ಅವರನ್ನು ಸೋಲಿಸಿದರು. ಫೈನಲ್ನಲ್ಲಿ ಮಾನವ್ ಅವರು 4-11,11-7,7-11, 11-4, 11-8, 11-0 ಯಿಂದ ಮುಂದಿದ್ದಾಗ, ರಾಷ್ಟ್ರೀಯ ಚಾಂಪಿಯನ್ ಸತ್ಯನ್ ಬೆನ್ನು ನೋವು ಕಾರಣ ಪಂದ್ಯ ಬಿಟ್ಟುಕೊಟ್ಟರು.</p><p>ಎರಡನೇ ಶ್ರೇಯಾಂಕದ ಅರ್ಚನಾ 3–1 ಮುನ್ನಡೆಯಲ್ಲಿದ್ದರೂ ಪಂದ್ಯ ಗೆಲ್ಲಲಾಗಲಿಲ್ಲ. ಐದನೇ ಗೇಮ್ನಲ್ಲಿ ಆರ್ಬಿಐ ಆಟಗಾರ್ತಿ ಶ್ರೀಜಾ ಹಿಡಿತ ಪಡೆಯುವಲ್ಲಿ ಯಶಸ್ವಿ ಆದರು. ಶ್ರೀಜಾ 6-11, 9-11, 11-4, 9-11, 11-7, 12-10, 12-10 ರಿಂದ ಅರ್ಚನಾ ಅವರನ್ನು ಮಣಿಸಿದರು.</p><p>ಆಕಾಶ್ಗೆ ಕಂಚು: ಕರ್ನಾಟಕದ ಆಕಾಶ್ ಕೆ.ಜೆ. 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ನಲ್ಲಿ ಕಂಚಿನ ಪದಕ ಪಡೆದರು. ಅವರು ಸೆಮಿಫೈನಲ್ನಲ್ಲಿ ಉತ್ತರ ಪ್ರದೇಶದ ದಿವ್ಯಾಂಶು ಶ್ರೀವಾತ್ಸವ ಅವರಿಗೆ 1–3ರಲ್ಲಿ (3–11, 11–4, 8–11, 4–11) ಮಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯವಾಡ</strong>: ಅಗ್ರ ಶ್ರೇಯಾಂಕದ ಮಾನವ್ ಠಕ್ಕರ್ ಅವರು ಗಾಯಾಳಾದ ಎರಡನೇ ಶ್ರೇಯಾಂಕದ ಜಿ.ಸತ್ಯನ್ ಅವರನ್ನು 4–2 ರಿಂದ ಸೋಟಲಿಸಿ ಯುಟಿಟಿ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ಕಿರೀಟ ಧರಿಸಿದರು.</p><p>ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಶ್ರೀಜಾ ಆಕುಲಾ ಹಿನ್ನಡೆಯಿಂದ ಚೇತರಿಸಿ ಕರ್ನಾಟಕದ ಅರ್ಚನಾ ಕಾಮತ್ ಅವರನ್ನು ಸೋಲಿಸಿದರು. ಫೈನಲ್ನಲ್ಲಿ ಮಾನವ್ ಅವರು 4-11,11-7,7-11, 11-4, 11-8, 11-0 ಯಿಂದ ಮುಂದಿದ್ದಾಗ, ರಾಷ್ಟ್ರೀಯ ಚಾಂಪಿಯನ್ ಸತ್ಯನ್ ಬೆನ್ನು ನೋವು ಕಾರಣ ಪಂದ್ಯ ಬಿಟ್ಟುಕೊಟ್ಟರು.</p><p>ಎರಡನೇ ಶ್ರೇಯಾಂಕದ ಅರ್ಚನಾ 3–1 ಮುನ್ನಡೆಯಲ್ಲಿದ್ದರೂ ಪಂದ್ಯ ಗೆಲ್ಲಲಾಗಲಿಲ್ಲ. ಐದನೇ ಗೇಮ್ನಲ್ಲಿ ಆರ್ಬಿಐ ಆಟಗಾರ್ತಿ ಶ್ರೀಜಾ ಹಿಡಿತ ಪಡೆಯುವಲ್ಲಿ ಯಶಸ್ವಿ ಆದರು. ಶ್ರೀಜಾ 6-11, 9-11, 11-4, 9-11, 11-7, 12-10, 12-10 ರಿಂದ ಅರ್ಚನಾ ಅವರನ್ನು ಮಣಿಸಿದರು.</p><p>ಆಕಾಶ್ಗೆ ಕಂಚು: ಕರ್ನಾಟಕದ ಆಕಾಶ್ ಕೆ.ಜೆ. 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ನಲ್ಲಿ ಕಂಚಿನ ಪದಕ ಪಡೆದರು. ಅವರು ಸೆಮಿಫೈನಲ್ನಲ್ಲಿ ಉತ್ತರ ಪ್ರದೇಶದ ದಿವ್ಯಾಂಶು ಶ್ರೀವಾತ್ಸವ ಅವರಿಗೆ 1–3ರಲ್ಲಿ (3–11, 11–4, 8–11, 4–11) ಮಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>