ಬೆಂಗಳೂರು: ಕರ್ನಾಟಕದ ತೆಶುಬ್ ದಿನೇಶ್ ಅವರು ಇಂದೋರ್ನಲ್ಲಿ ನಡೆಯುತ್ತಿರುವ 85ನೇ ಅಂತರ ರಾಜ್ಯ ಯುಟಿಟಿ ಕೆಡೆಟ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಬಾಲಕರ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ತೆಶುಬ್ 5-11, 11-5, 5-11, 8-11ರಿಂದ ಪಶ್ಚಿಮ ಬಂಗಾಲದ ಸೋಹಮ್ ಮುಖರ್ಜಿ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದರು.
ಅವರು ಸೆಮಿಫೈನಲ್ನಲ್ಲಿ ಪಶ್ಚಿಮ ಬಂಗಾಲದ ದೇಬ್ರಾಜ್ ಭಟ್ಟಾಚಾರ್ಯ ಅವರನ್ನು ಮಣಿಸಿದ್ದರು.