<p><strong>ನವದೆಹಲಿ</strong>: ಜುಲೈ 28ರಂದು ಅಥೆನ್ಸ್ನಲ್ಲಿ ಆರಂಭವಾಗುವ ಪ್ರತಿಷ್ಠಿತ 17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ ಈಗ ಭಾರತದ ಪೈಲ್ವಾನರಿಗೆ ತಪ್ಪಿಹೋಗುವ ಆತಂಕ ಎದುರಾಗಿದೆ. ಕೂಟ ಆರಂಭಕ್ಕೆ ನಾಲ್ಕೇ ದಿನಗಳಿದ್ದು, 47 ಮಂದಿಯ ಕೆಡೆಟ್ ತಂಡಕ್ಕೆ ವೀಸಾ ಸಮಸ್ಯೆ ಎದುರಾಗಿದೆ.</p><p>ಜುಲೈ 10ರಂದೇ ವೀಸಾ ಕೋರಿ ಗ್ರೀಸ್ ರಾಯಭಾರ ಕಚೇರಿಗೆ ಭಾರತ ಕುಸ್ತಿ ಫೆಡರೇಷನ್ ಸಮಯ ಕೇಳಿತ್ತು. ಆದರೆ 12 ದಿನ ಕಳೆದರೂ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದು ತಂಡಕ್ಕೆ ಕಳವಳ ಮೂಡಿಸಿದೆ.</p><p>ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಫೆಡರೇಷನ್ ಜುಲೈ 16ರಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಮೊರೆಹೋಗಿದೆ. </p><p>47 ಮಂದಿಯ ತಂಡದಲ್ಲಿ 30 ಕುಸ್ತಿಪಟುಗಳಿದ್ದಾರೆ. ಜುಲೈ 7 ಮತ್ತು 8 ರಂದು ಕ್ರಮವಾಗಿ ದೆಹಲಿ ಮತ್ತು ಲಖನೌದಲ್ಲಿ ಆಯ್ಕೆ ಟ್ರಯಲ್ಸ್ ನಡೆಸಿ ಕುಸ್ತಿಪಟುಗಳ ಆಯ್ಕೆ ಮಾಡಲಾಗಿತ್ತು. ತಂಡ ನಿಗದಿಯಂತೆ ಶನಿವಾರ ನಿರ್ಗಮಿಸಬೇಕಾಗಿದೆ.</p><p>‘ಗ್ರೀಸ್ ರಾಯಭಾರ ಕಚೇರಿಗೆ ಪದೇ ಪದೇ ವಿನಂತಿ ಮಾಡಿದರೂ, ಅವರಿಂದ ಪೂರಕ ಪ್ರತಿಕ್ರಿಯೆ ಬರದ ಕಾರಣ ಮಧ್ಯಪ್ರವೇಶ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಯಿತು’ ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದರು.</p><p>‘ಆಟಗಾರರ, ತರಬೇತುದಾರರ ಪ್ರಯಾಣದ ಟಿಕೆಟ್ಗಳು ಸಿದ್ಧ ಇವೆ. ಅನುಭವ ಪಡೆಯುವ ದೃಷ್ವಿಯಿಂದ ಈ ಕೂಟವು ಯುವ ಕುಸ್ತಿಪಟುಗಳಿಗೆ ಮಹತ್ವದ್ದಾಗಿದೆ. ಅವರು ವಿಶ್ವ ಚಾಂಪಿಯನ್ಷಿಪ್ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶ ನಮ್ಮದು’ ಎಂದರು. </p><p>ಈ ಹಿಂದೆ ಗ್ರೀಸ್ ರಾಯಭಾರ ಕಚೇರಿಯಿಂದ ನಾಲ್ಕೇ ದಿನಗಳಲ್ಲಿ ವೀಸಾ ನೀಡಲಾಗಿತ್ತು. ಈ ಬಾರಿ ವಿಳಂಬವಾಗಿದೆ. ಇತ್ತೀಚೆಗೆ ಕುಸ್ತಿ ಸ್ಪರ್ಧಿ ಹರ್ಷಿತಾ ಅವರಿಗೆ ಹಂಗೆರಿ ಎಂಬಸಿಯಿಂದ ಒಂದೇ ದಿನದಲ್ಲಿ ವೀಸಾ ದೊರಕಿತ್ತು. ಈ ಬಾರಿ ವಿಳಂಬಕ್ಕೆ ಕಾರಣ ತಿಳಿಯುತ್ತಿಲ್ಲ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.</p><p>ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ರಚನಾ ಪರಮಾರ್ (43 ಕೆ.ಜಿ), ಮೋನಿ (57 ಕೆ.ಜಿ), ಅಶ್ವಿನಿ ವೈಷ್ಣೋ (65 ಕೆ.ಜಿ), ಮನಿಷಾ (69 ಕೆ.ಜಿ) ಮೊದಲಾದವರು ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜುಲೈ 28ರಂದು ಅಥೆನ್ಸ್ನಲ್ಲಿ ಆರಂಭವಾಗುವ ಪ್ರತಿಷ್ಠಿತ 17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ ಈಗ ಭಾರತದ ಪೈಲ್ವಾನರಿಗೆ ತಪ್ಪಿಹೋಗುವ ಆತಂಕ ಎದುರಾಗಿದೆ. ಕೂಟ ಆರಂಭಕ್ಕೆ ನಾಲ್ಕೇ ದಿನಗಳಿದ್ದು, 47 ಮಂದಿಯ ಕೆಡೆಟ್ ತಂಡಕ್ಕೆ ವೀಸಾ ಸಮಸ್ಯೆ ಎದುರಾಗಿದೆ.</p><p>ಜುಲೈ 10ರಂದೇ ವೀಸಾ ಕೋರಿ ಗ್ರೀಸ್ ರಾಯಭಾರ ಕಚೇರಿಗೆ ಭಾರತ ಕುಸ್ತಿ ಫೆಡರೇಷನ್ ಸಮಯ ಕೇಳಿತ್ತು. ಆದರೆ 12 ದಿನ ಕಳೆದರೂ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದು ತಂಡಕ್ಕೆ ಕಳವಳ ಮೂಡಿಸಿದೆ.</p><p>ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಫೆಡರೇಷನ್ ಜುಲೈ 16ರಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಮೊರೆಹೋಗಿದೆ. </p><p>47 ಮಂದಿಯ ತಂಡದಲ್ಲಿ 30 ಕುಸ್ತಿಪಟುಗಳಿದ್ದಾರೆ. ಜುಲೈ 7 ಮತ್ತು 8 ರಂದು ಕ್ರಮವಾಗಿ ದೆಹಲಿ ಮತ್ತು ಲಖನೌದಲ್ಲಿ ಆಯ್ಕೆ ಟ್ರಯಲ್ಸ್ ನಡೆಸಿ ಕುಸ್ತಿಪಟುಗಳ ಆಯ್ಕೆ ಮಾಡಲಾಗಿತ್ತು. ತಂಡ ನಿಗದಿಯಂತೆ ಶನಿವಾರ ನಿರ್ಗಮಿಸಬೇಕಾಗಿದೆ.</p><p>‘ಗ್ರೀಸ್ ರಾಯಭಾರ ಕಚೇರಿಗೆ ಪದೇ ಪದೇ ವಿನಂತಿ ಮಾಡಿದರೂ, ಅವರಿಂದ ಪೂರಕ ಪ್ರತಿಕ್ರಿಯೆ ಬರದ ಕಾರಣ ಮಧ್ಯಪ್ರವೇಶ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಯಿತು’ ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದರು.</p><p>‘ಆಟಗಾರರ, ತರಬೇತುದಾರರ ಪ್ರಯಾಣದ ಟಿಕೆಟ್ಗಳು ಸಿದ್ಧ ಇವೆ. ಅನುಭವ ಪಡೆಯುವ ದೃಷ್ವಿಯಿಂದ ಈ ಕೂಟವು ಯುವ ಕುಸ್ತಿಪಟುಗಳಿಗೆ ಮಹತ್ವದ್ದಾಗಿದೆ. ಅವರು ವಿಶ್ವ ಚಾಂಪಿಯನ್ಷಿಪ್ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶ ನಮ್ಮದು’ ಎಂದರು. </p><p>ಈ ಹಿಂದೆ ಗ್ರೀಸ್ ರಾಯಭಾರ ಕಚೇರಿಯಿಂದ ನಾಲ್ಕೇ ದಿನಗಳಲ್ಲಿ ವೀಸಾ ನೀಡಲಾಗಿತ್ತು. ಈ ಬಾರಿ ವಿಳಂಬವಾಗಿದೆ. ಇತ್ತೀಚೆಗೆ ಕುಸ್ತಿ ಸ್ಪರ್ಧಿ ಹರ್ಷಿತಾ ಅವರಿಗೆ ಹಂಗೆರಿ ಎಂಬಸಿಯಿಂದ ಒಂದೇ ದಿನದಲ್ಲಿ ವೀಸಾ ದೊರಕಿತ್ತು. ಈ ಬಾರಿ ವಿಳಂಬಕ್ಕೆ ಕಾರಣ ತಿಳಿಯುತ್ತಿಲ್ಲ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.</p><p>ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ರಚನಾ ಪರಮಾರ್ (43 ಕೆ.ಜಿ), ಮೋನಿ (57 ಕೆ.ಜಿ), ಅಶ್ವಿನಿ ವೈಷ್ಣೋ (65 ಕೆ.ಜಿ), ಮನಿಷಾ (69 ಕೆ.ಜಿ) ಮೊದಲಾದವರು ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>