ದೆಹಲಿಯಲ್ಲಿ ಬುಧವಾರ ಭಾರಿ ಮಳೆಯಾಗಿತ್ತು. ಇದರಿಂದ ಧರಣಿನಿರತರ ಹಾಸಿಗೆಗಳು ಒದ್ದೆಯಾಗಿದ್ದವು. ಅವರಿಗೆ ನೆರವಾಗಲು ರಾತ್ರಿ 11 ಗಂಟೆ ಸುಮಾರಿಗೆ ಎಎಪಿಯ ಶಾಸಕ ಸೋಮನಾಥ ಭಾರ್ತಿ ಅವರು ಮಡಚುವ ಹಾಸಿಗೆಯೊಂದಿಗೆ ಜಂತರ್ ಮಂತರ್ಗೆ ಬಂದರು. ಹಾಸಿಗೆ ತರಲು ಅನುಮತಿ ಪಡೆದಿಲ್ಲ ಎಂದು ಪೊಲೀಸರು ಆಕ್ಷೇಪಿಸಿದರು. ಈ ವೇಳೆ, ಮಾತಿನ ಚಕಮಕಿ ಆರಂಭವಾಯಿತು. ಧರಣಿನಿರತರೂ ಕೂಡಿಕೊಂಡರು. ನಂತರ ತಳ್ಳಾಟ ನಡೆಯಿತು.