<p><strong>ಬೆಂಗಳೂರು:</strong> ‘ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಮ್ಮ ಸಾಮರ್ಥ್ಯ ಅಳೆಯುವ ಉತ್ತಮ ವೇದಿಕೆಯಾಗಲಿದೆ‘ ಎಂದು ಭಾರತ ಹಾಕಿ ತಂಡದ ಮಿಡ್ಫೀಲ್ಡರ್ ಸುಮಿತ್ ಹೇಳಿದ್ದಾರೆ.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ಪರ್ಧಾತ್ಮಕ ಹಾಕಿ ಚಟುವಟಿಕೆಗಳನ್ನು ಭಾರತ ತಂಡವು ಢಾಕಾದಲ್ಲಿ ಮಾರ್ಚ್ನಲ್ಲಿ ನಿಗದಿಯಾಗಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮೂಲಕ ಪುನರಾರಂಭಿಸಲಿದೆ.</p>.<p>‘ನಮ್ಮ ಕೌಶಲಗಳಿಗೆ ಸಾಣೆ ಹಿಡಿಯಲು ತರಬೇತಿಯು ಪುನರಾರಂಭಗೊಂಡಿದ್ದು ಅದೃಷ್ಟ. ಟೋಕಿಯೊ ಒಲಿಂಪಿಕ್ಸ್ ಮುಂದಿರುವಂತೆ, ನಮ್ಮ ಸಾಮರ್ಥ್ಯದ ಮಟ್ಟವನ್ನು ಅಳೆಯಲು ಚಾಂಪಿಯನ್ಸ್ ಟ್ರೋಫಿ ಉತ್ತಮ ವೇದಿಕೆಯಾಗಲಿದೆ. ಇದರಿಂದ ಪ್ರದರ್ಶನವನ್ನು ಸುಧಾರಿಸಿಕೊಳ್ಳಲೂ ಅನುಕೂಲವಾಗಲಿದೆ‘ ಎಂದು ಸುಮಿತ್ ಹೇಳಿದರು.</p>.<p>ಸುಮಿತ್ ಅವರು ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ತಂಡದಲ್ಲಿ ಇದ್ದಾರೆ.</p>.<p>ಶಿಬಿರದ ಕುರಿತು ಮಾತನಾಡಿದ ಅವರು ‘ಕೋವಿಡ್ ಕಾರಣದಿಂದ ನಾವು ಈ ವರ್ಷ ಯಾವುದೇ ಪಂದ್ಯದಲ್ಲಿ ಆಡದಿದ್ದರೂ, ಶಿಬಿರದಲ್ಲಿ ನಮ್ಮ ನಮ್ಮಲ್ಲೇ ಪಂದ್ಯಗಳನ್ನು ನಡೆಸಿ ಸಾಮರ್ಥ್ಯ ಪರೀಕ್ಷಿಸಿಕೊಂಡಿದ್ದೇವೆ‘ ಎಂದರು.</p>.<p>2016ರಲ್ಲಿ ಎಫ್ಐಎಚ್ ಜೂನಿಯರ್ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಸುಮಿತ್ ಇದ್ದರು. ಮಣಿಕಟ್ಟಿನ ಗಾಯದ ಕಾರಣ ಕಳೆದ ವರ್ಷ ಕೆಲವು ಪ್ರಮುಖ ಟೂರ್ನಿಗಳಲ್ಲಿ ಅವರು ಆಡಿರಲಿಲ್ಲ.</p>.<p>‘ಸದ್ಯ ತರಬೇತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ವಿಶ್ವಾಸವಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ‘ ಎಂದು ಸುಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಮ್ಮ ಸಾಮರ್ಥ್ಯ ಅಳೆಯುವ ಉತ್ತಮ ವೇದಿಕೆಯಾಗಲಿದೆ‘ ಎಂದು ಭಾರತ ಹಾಕಿ ತಂಡದ ಮಿಡ್ಫೀಲ್ಡರ್ ಸುಮಿತ್ ಹೇಳಿದ್ದಾರೆ.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ಪರ್ಧಾತ್ಮಕ ಹಾಕಿ ಚಟುವಟಿಕೆಗಳನ್ನು ಭಾರತ ತಂಡವು ಢಾಕಾದಲ್ಲಿ ಮಾರ್ಚ್ನಲ್ಲಿ ನಿಗದಿಯಾಗಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮೂಲಕ ಪುನರಾರಂಭಿಸಲಿದೆ.</p>.<p>‘ನಮ್ಮ ಕೌಶಲಗಳಿಗೆ ಸಾಣೆ ಹಿಡಿಯಲು ತರಬೇತಿಯು ಪುನರಾರಂಭಗೊಂಡಿದ್ದು ಅದೃಷ್ಟ. ಟೋಕಿಯೊ ಒಲಿಂಪಿಕ್ಸ್ ಮುಂದಿರುವಂತೆ, ನಮ್ಮ ಸಾಮರ್ಥ್ಯದ ಮಟ್ಟವನ್ನು ಅಳೆಯಲು ಚಾಂಪಿಯನ್ಸ್ ಟ್ರೋಫಿ ಉತ್ತಮ ವೇದಿಕೆಯಾಗಲಿದೆ. ಇದರಿಂದ ಪ್ರದರ್ಶನವನ್ನು ಸುಧಾರಿಸಿಕೊಳ್ಳಲೂ ಅನುಕೂಲವಾಗಲಿದೆ‘ ಎಂದು ಸುಮಿತ್ ಹೇಳಿದರು.</p>.<p>ಸುಮಿತ್ ಅವರು ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ತಂಡದಲ್ಲಿ ಇದ್ದಾರೆ.</p>.<p>ಶಿಬಿರದ ಕುರಿತು ಮಾತನಾಡಿದ ಅವರು ‘ಕೋವಿಡ್ ಕಾರಣದಿಂದ ನಾವು ಈ ವರ್ಷ ಯಾವುದೇ ಪಂದ್ಯದಲ್ಲಿ ಆಡದಿದ್ದರೂ, ಶಿಬಿರದಲ್ಲಿ ನಮ್ಮ ನಮ್ಮಲ್ಲೇ ಪಂದ್ಯಗಳನ್ನು ನಡೆಸಿ ಸಾಮರ್ಥ್ಯ ಪರೀಕ್ಷಿಸಿಕೊಂಡಿದ್ದೇವೆ‘ ಎಂದರು.</p>.<p>2016ರಲ್ಲಿ ಎಫ್ಐಎಚ್ ಜೂನಿಯರ್ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಸುಮಿತ್ ಇದ್ದರು. ಮಣಿಕಟ್ಟಿನ ಗಾಯದ ಕಾರಣ ಕಳೆದ ವರ್ಷ ಕೆಲವು ಪ್ರಮುಖ ಟೂರ್ನಿಗಳಲ್ಲಿ ಅವರು ಆಡಿರಲಿಲ್ಲ.</p>.<p>‘ಸದ್ಯ ತರಬೇತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ವಿಶ್ವಾಸವಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ‘ ಎಂದು ಸುಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>