<p><strong>ಹೊಸಮಲಪನಗುಡಿ (ಹೊಸಪೇಟೆ ತಾಲ್ಲೂಕು):</strong> ‘ಹಂಪಿ ಉತ್ಸವ’ದ ಪ್ರಯುಕ್ತ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪಟ್ಟುಗಳೊಂದಿಗೆ ಬೆಳಗಾವಿಯ ಬಿರೇಶ್ ಅವರನ್ನು ಮಣಿಸಿ, ವಿಜಯಪುರದ ಅಮಗೊಂಡ ಅವರು ‘ಹಂಪಿ ವೀರ ಕೇಸರಿ’ ಬಿರುದಿಗೆ ಪಾತ್ರರಾದರು.</p>.<p>74 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆಯಲ್ಲಿ ಅಮಗೊಂಡ ಈ ಸಾಧನೆ ಮಾಡಿದರು. ಬಿರೇಶ್ ದ್ವಿತೀಯ ಹಾಗೂ ದಾವಣಗೆರೆಯ ಪಂಕಜ್ ಕುಮಾರ್ ತೃತೀಯ ಬಹುಮಾನಕ್ಕೆ ತೃಪ್ತರಾದರು.</p>.<p>74 ಕೆ.ಜಿ. ವಿಭಾಗದಲ್ಲಿ ಗದಗಿನ ಪಾಲಾಕ್ಷಗೌಡ, ದಾವಣಗೆರೆಯವರಾದ ಅನಿಲ್ ದಳವಾಯಿ ಹಾಗೂ ವೆಂಕಟೇಶ್ ಜಗನ್ನಾಥ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.</p>.<p>54 ಕೆ.ಜಿ. ವಿಭಾಗದಲ್ಲಿ ಗದಗಿನ ಪ್ರಶಾಂತ ಗೌಡ ಪ್ರಥಮ, ಹರಪನಹಳ್ಳಿಯ ಕೊರವರ ಸಂಜೀವ ದ್ವಿತೀಯ ಹಾಗೂ ದಾವಣಗೆರೆಯ ಬಿ.ಎಸ್. ಪ್ರತೀಕ್ ತೃತೀಯ ಸ್ಥಾನ ಪಡೆದರು.</p>.<p>61 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಪ್ರಭಾಕರ್ ಫಾಲ್ಕೆ, ಬೆಳಗಾವಿಯ ಮುರುಗೇಶ್ ತಮಡಿ ಹಾಗೂ ದಾವಣಗೆರೆಯ ಎಂ. ಲಕ್ಷ್ಮಣ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.</p>.<p>65 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯವರಾದ ಕಾರ್ತಿಕ್ ಹಿತ್ತಾಂಗಿ, ಶಿವಾನಂದ ತಳವಾರ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಗಳಿಸಿದರೆ, ದಾವಣಗೆರೆಯ ಮಂಜುನಾಥ ತೃತೀಯ ಸ್ಥಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಮಲಪನಗುಡಿ (ಹೊಸಪೇಟೆ ತಾಲ್ಲೂಕು):</strong> ‘ಹಂಪಿ ಉತ್ಸವ’ದ ಪ್ರಯುಕ್ತ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪಟ್ಟುಗಳೊಂದಿಗೆ ಬೆಳಗಾವಿಯ ಬಿರೇಶ್ ಅವರನ್ನು ಮಣಿಸಿ, ವಿಜಯಪುರದ ಅಮಗೊಂಡ ಅವರು ‘ಹಂಪಿ ವೀರ ಕೇಸರಿ’ ಬಿರುದಿಗೆ ಪಾತ್ರರಾದರು.</p>.<p>74 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆಯಲ್ಲಿ ಅಮಗೊಂಡ ಈ ಸಾಧನೆ ಮಾಡಿದರು. ಬಿರೇಶ್ ದ್ವಿತೀಯ ಹಾಗೂ ದಾವಣಗೆರೆಯ ಪಂಕಜ್ ಕುಮಾರ್ ತೃತೀಯ ಬಹುಮಾನಕ್ಕೆ ತೃಪ್ತರಾದರು.</p>.<p>74 ಕೆ.ಜಿ. ವಿಭಾಗದಲ್ಲಿ ಗದಗಿನ ಪಾಲಾಕ್ಷಗೌಡ, ದಾವಣಗೆರೆಯವರಾದ ಅನಿಲ್ ದಳವಾಯಿ ಹಾಗೂ ವೆಂಕಟೇಶ್ ಜಗನ್ನಾಥ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.</p>.<p>54 ಕೆ.ಜಿ. ವಿಭಾಗದಲ್ಲಿ ಗದಗಿನ ಪ್ರಶಾಂತ ಗೌಡ ಪ್ರಥಮ, ಹರಪನಹಳ್ಳಿಯ ಕೊರವರ ಸಂಜೀವ ದ್ವಿತೀಯ ಹಾಗೂ ದಾವಣಗೆರೆಯ ಬಿ.ಎಸ್. ಪ್ರತೀಕ್ ತೃತೀಯ ಸ್ಥಾನ ಪಡೆದರು.</p>.<p>61 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಪ್ರಭಾಕರ್ ಫಾಲ್ಕೆ, ಬೆಳಗಾವಿಯ ಮುರುಗೇಶ್ ತಮಡಿ ಹಾಗೂ ದಾವಣಗೆರೆಯ ಎಂ. ಲಕ್ಷ್ಮಣ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.</p>.<p>65 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯವರಾದ ಕಾರ್ತಿಕ್ ಹಿತ್ತಾಂಗಿ, ಶಿವಾನಂದ ತಳವಾರ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಗಳಿಸಿದರೆ, ದಾವಣಗೆರೆಯ ಮಂಜುನಾಥ ತೃತೀಯ ಸ್ಥಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>