<p><strong>ಉಡುಪಿ:</strong> ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರಂಭವಾದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಕಬಡ್ಡಿ ಟೂರ್ನಿಯ ಮೊದಲ ದಿನ ರಾಜ್ಯದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು.</p>.<p>ಬೆಂಗಳೂರಿನ ಸೆಂಟ್ರಲ್ ವಿವಿ ತಂಡವು62-42 ಪಾಯಿಂಟ್ಸ್ಗಳಿಂದ ಆಂಧ್ರದ ಜವಾಹಾರ್ಲಾಲ್ ನೆಹರೂ ತಾಂತ್ರಿಕ ವಿವಿ ವಿರುದ್ಧ ಜಯಗಳಿಸಿತು. ಮೈಸೂರು ವಿವಿ 88-20 ಪಾಯಿಂಟ್ಸ್ಗಳಿಂದ ಆಂಧ್ರಪ್ರದೇಶದ ಶ್ರೀಕೃಷ್ಣದೇವರಾಯ ವಿವಿಯನ್ನು ಮಣಿಸಿತು.</p>.<p>ತುಮಕೂರು ವಿವಿಯು 62-22 ಪಾಯಿಂಟ್ಸ್ಗಳಿಂದ ಚೆನ್ನೈನ ಸವಿತಾ ವಿವಿ ವಿರುದ್ಧ, ಬೆಂಗಳೂರು ಉತ್ತರ ವಿವಿ54-27 ಪಾಯಿಂಟ್ಸ್ಗಳಿಂದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ವಿರುದ್ಧ, ಬೆಂಗಳೂರಿನ ಪಿಇಎಸ್ ವಿವಿ 74–51 ವಿಶಾಖಪಟ್ಟಣಂನ ಗೀತಂ ವಿವಿ ವಿರುದ್ಧ ಜಯಗಳಿಸಿತು.</p>.<p>ಧಾರವಾಡದ ಕರ್ನಾಟಕ ವಿವಿ 48–42 ಪಾಯಿಂಟ್ಸ್ಗಳಿಂದ ಕೇರಳ ವಿವಿ ವಿರುದ್ಧ, ದಾವಣಗೆರೆ ವಿವಿ48–19ರಿಂದ ಶ್ರೀಕಾಕುಳಂನ ಡಾ.ಬಿ.ಆರ್.ಅಂಬೇಡ್ಕರ್ ವಿವಿಯನ್ನು, ಮಂಗಳೂರಿನ ಯೇನಪೋಯ ವಿವಿಯು 53–43 ಅಂತರದಲ್ಲಿ ಹುಬ್ಬಳ್ಳಿಯ ಕಾನೂನು ವಿವಿಯನ್ನು ಪರಾಭವಗೊಳಿಸಿತು.</p>.<p>ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯು 67–28 ಅಂತರದಲ್ಲಿ ಜವಹಾರ್ಲಾಲ್ ನೆಹರೂ ಕೃಷಿ ಹಾಗೂ ಫೈನ್ ಆರ್ಟ್ಸ್ ವಿವಿ ವಿರುದ್ಧ, ಬೆಂಗಳೂರಿನ ಕ್ರೈಸ್ಟ್ ವಿವಿಯು61–47 ಪಾಯಿಂಟ್ಸ್ಗಳಿಂದ ತಿರುವರೂರು ಸೆಂಟ್ರಲ್ ವಿವಿಯನ್ನು, ಶಿವಮೊಗ್ಗದ ಕುವೆಂಪು ವಿವಿಯು68–28ರಿಂದ ತಿರುಪತಿಯ ಶ್ರೀವೆಂಕಟೇಶ್ವರ ವಿವಿಯನ್ನು ಮಣಿಸಿತು.</p>.<p>ದಕ್ಷಿಣ ಭಾರತದ 6 ರಾಜ್ಯಗಳಿಂದ 70 ವಿಶ್ವವಿದ್ಯಾಲಯಗಳು ಪಾಲ್ಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ 4 ಸ್ಥಾನ ಪಡೆದ ವಿಶ್ವವಿದ್ಯಾಲಯಗಳು ನೇರವಾಗಿ ಕ್ವಾರ್ಟರ್ ಪೈನಲ್ ಪ್ರವೇಶಿಸಿವೆ.</p>.<p>4 ಅಂಕಣಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಹಗಲು ಹಾಗೂ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು ಜಂಟಿ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರಂಭವಾದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಕಬಡ್ಡಿ ಟೂರ್ನಿಯ ಮೊದಲ ದಿನ ರಾಜ್ಯದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು.</p>.<p>ಬೆಂಗಳೂರಿನ ಸೆಂಟ್ರಲ್ ವಿವಿ ತಂಡವು62-42 ಪಾಯಿಂಟ್ಸ್ಗಳಿಂದ ಆಂಧ್ರದ ಜವಾಹಾರ್ಲಾಲ್ ನೆಹರೂ ತಾಂತ್ರಿಕ ವಿವಿ ವಿರುದ್ಧ ಜಯಗಳಿಸಿತು. ಮೈಸೂರು ವಿವಿ 88-20 ಪಾಯಿಂಟ್ಸ್ಗಳಿಂದ ಆಂಧ್ರಪ್ರದೇಶದ ಶ್ರೀಕೃಷ್ಣದೇವರಾಯ ವಿವಿಯನ್ನು ಮಣಿಸಿತು.</p>.<p>ತುಮಕೂರು ವಿವಿಯು 62-22 ಪಾಯಿಂಟ್ಸ್ಗಳಿಂದ ಚೆನ್ನೈನ ಸವಿತಾ ವಿವಿ ವಿರುದ್ಧ, ಬೆಂಗಳೂರು ಉತ್ತರ ವಿವಿ54-27 ಪಾಯಿಂಟ್ಸ್ಗಳಿಂದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ವಿರುದ್ಧ, ಬೆಂಗಳೂರಿನ ಪಿಇಎಸ್ ವಿವಿ 74–51 ವಿಶಾಖಪಟ್ಟಣಂನ ಗೀತಂ ವಿವಿ ವಿರುದ್ಧ ಜಯಗಳಿಸಿತು.</p>.<p>ಧಾರವಾಡದ ಕರ್ನಾಟಕ ವಿವಿ 48–42 ಪಾಯಿಂಟ್ಸ್ಗಳಿಂದ ಕೇರಳ ವಿವಿ ವಿರುದ್ಧ, ದಾವಣಗೆರೆ ವಿವಿ48–19ರಿಂದ ಶ್ರೀಕಾಕುಳಂನ ಡಾ.ಬಿ.ಆರ್.ಅಂಬೇಡ್ಕರ್ ವಿವಿಯನ್ನು, ಮಂಗಳೂರಿನ ಯೇನಪೋಯ ವಿವಿಯು 53–43 ಅಂತರದಲ್ಲಿ ಹುಬ್ಬಳ್ಳಿಯ ಕಾನೂನು ವಿವಿಯನ್ನು ಪರಾಭವಗೊಳಿಸಿತು.</p>.<p>ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯು 67–28 ಅಂತರದಲ್ಲಿ ಜವಹಾರ್ಲಾಲ್ ನೆಹರೂ ಕೃಷಿ ಹಾಗೂ ಫೈನ್ ಆರ್ಟ್ಸ್ ವಿವಿ ವಿರುದ್ಧ, ಬೆಂಗಳೂರಿನ ಕ್ರೈಸ್ಟ್ ವಿವಿಯು61–47 ಪಾಯಿಂಟ್ಸ್ಗಳಿಂದ ತಿರುವರೂರು ಸೆಂಟ್ರಲ್ ವಿವಿಯನ್ನು, ಶಿವಮೊಗ್ಗದ ಕುವೆಂಪು ವಿವಿಯು68–28ರಿಂದ ತಿರುಪತಿಯ ಶ್ರೀವೆಂಕಟೇಶ್ವರ ವಿವಿಯನ್ನು ಮಣಿಸಿತು.</p>.<p>ದಕ್ಷಿಣ ಭಾರತದ 6 ರಾಜ್ಯಗಳಿಂದ 70 ವಿಶ್ವವಿದ್ಯಾಲಯಗಳು ಪಾಲ್ಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ 4 ಸ್ಥಾನ ಪಡೆದ ವಿಶ್ವವಿದ್ಯಾಲಯಗಳು ನೇರವಾಗಿ ಕ್ವಾರ್ಟರ್ ಪೈನಲ್ ಪ್ರವೇಶಿಸಿವೆ.</p>.<p>4 ಅಂಕಣಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಹಗಲು ಹಾಗೂ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು ಜಂಟಿ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>