<p><strong>ನವದೆಹಲಿ: </strong>ಅಥ್ಲೀಟ್ ಪಿ.ಟಿ.ಉಷಾ, ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಶೂಟರ್ ಸುಮಾ ಶಿರೂರು ಸೇರಿದಂತೆ ಉನ್ನತ ಸಾಧನೆ ಮಾಡಿದ ಎಂಟು ಕ್ರೀಡಾಪಟುಗಳಿಗೆ ಡಿ.10 ರಂದು ನಡೆಯಲಿರುವ ಭಾರತ ಒಲಿಂಪಿಕ್ ಸಮಿತಿಯ (ಐಒಎ) ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ.</p>.<p>ಹೊಸದಾಗಿ ರಚನೆಯಾಗಿರುವ ಅಥ್ಲೀಟ್ಗಳ ಸಮಿತಿಯು ‘ಉನ್ನತ ಸಾಧನೆ’ ಮಾಡಿದ ಎಂಟು ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಎಂ.ಎಂ.ಸೌಮ್ಯಾ (ಹಾಕಿ), ರೋಹಿತ್ ರಾಜ್ಪಾಲ್ (ಟೆನಿಸ್), ಅಖಿಲ್ ಕುಮಾರ್ (ಬಾಕ್ಸಿಂಗ್), ಅಪರ್ಣಾ ಪೋಪಟ್ (ಬ್ಯಾಡ್ಮಿಂಟನ್) ಮತ್ತು ಡೋಲಾ ಬ್ಯಾನರ್ಜಿ (ಆರ್ಚರಿ) ಅವರು ಈ ಗೌರವ ಪಡೆದ ಇತರ ಐವರು ಕ್ರೀಡಾಪಟುಗಳಾಗಿದ್ದಾರೆ.</p>.<p>ಐಒಎ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿ ವಹಿಸಿರುವ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಎಂಟು ಮಂದಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ‘ಅಥ್ಲೀಟ್ಗಳ ಸಮಿತಿಯು ಎಂಟು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಎಲ್.ನಾಗೇಶ್ವರ ರಾವ್ ಅವರು ಆ ಹೆಸರುಗಳನ್ನು ಪ್ರಕಟಿಸಲಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಥ್ಲೀಟ್ ಪಿ.ಟಿ.ಉಷಾ, ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಶೂಟರ್ ಸುಮಾ ಶಿರೂರು ಸೇರಿದಂತೆ ಉನ್ನತ ಸಾಧನೆ ಮಾಡಿದ ಎಂಟು ಕ್ರೀಡಾಪಟುಗಳಿಗೆ ಡಿ.10 ರಂದು ನಡೆಯಲಿರುವ ಭಾರತ ಒಲಿಂಪಿಕ್ ಸಮಿತಿಯ (ಐಒಎ) ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ.</p>.<p>ಹೊಸದಾಗಿ ರಚನೆಯಾಗಿರುವ ಅಥ್ಲೀಟ್ಗಳ ಸಮಿತಿಯು ‘ಉನ್ನತ ಸಾಧನೆ’ ಮಾಡಿದ ಎಂಟು ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಎಂ.ಎಂ.ಸೌಮ್ಯಾ (ಹಾಕಿ), ರೋಹಿತ್ ರಾಜ್ಪಾಲ್ (ಟೆನಿಸ್), ಅಖಿಲ್ ಕುಮಾರ್ (ಬಾಕ್ಸಿಂಗ್), ಅಪರ್ಣಾ ಪೋಪಟ್ (ಬ್ಯಾಡ್ಮಿಂಟನ್) ಮತ್ತು ಡೋಲಾ ಬ್ಯಾನರ್ಜಿ (ಆರ್ಚರಿ) ಅವರು ಈ ಗೌರವ ಪಡೆದ ಇತರ ಐವರು ಕ್ರೀಡಾಪಟುಗಳಾಗಿದ್ದಾರೆ.</p>.<p>ಐಒಎ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿ ವಹಿಸಿರುವ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಎಂಟು ಮಂದಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ‘ಅಥ್ಲೀಟ್ಗಳ ಸಮಿತಿಯು ಎಂಟು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಎಲ್.ನಾಗೇಶ್ವರ ರಾವ್ ಅವರು ಆ ಹೆಸರುಗಳನ್ನು ಪ್ರಕಟಿಸಲಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>