ಕ್ರೀಡಾ ಪೋಷಕ ಪ್ರಶಸ್ತಿ ಗಳಿಸಿರುವ ಮಂಗಳೂರಿನ ಮಂಗಳ ಫ್ರೆಂಡ್ಸ್ ಸರ್ಕಲ್ ನಾಲ್ಕು ದಶಕಗಳಿಂದ ಉಚಿತ ವಾಲಿಬಾಲ್ ತರಬೇತಿ ನೀಡುತ್ತಿದೆ. ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಉರ್ವಸ್ಟೋರ್ನಲ್ಲಿ, ಸರ್ಕಾರ ನೀಡಿರುವ ನಾಲ್ಕು ಸೆಂಟ್ ಜಾಗವನ್ನೇ ಅಂಗಣ ಮಾಡಿಕೊಂಡಿರುವ ಸಂಸ್ಥೆಯಲ್ಲಿ ಅರುಣ್ ಬ್ಯಾಪ್ಟಿಸ್ಟ್, ಮನೋಜ್, ಗುರುಪ್ರಸಾದ್ ರಾವ್ ಮತ್ತು ದೀಪಕ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.